Advertisement

ರಾಂಚಿಯಲ್ಲಿ ಒಂದೇ ಕುಟುಂಬದ 7 ಮಂದಿಯಿಂದ ಸಾಮೂಹಿಕ ಆತ್ಮಹತ್ಯೆ

11:53 AM Jul 30, 2018 | udayavani editorial |

ರಾಂಚಿ : ರಾಷ್ಟ್ರ ರಾಜಧಾನಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಈಚೆಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜನಮನದಲ್ಲಿ ಇನ್ನೂ ಮಾಸದಿರುವ ನಡುವೆಯೇ ಇದೀಗ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಒಂದೇ ಕುಟುಂಬದ 7 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

Advertisement

ರಾಂಚಿಯ ಕಾಂಕೇ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಸಾಮೂಹಿಕ ಆತ್ಮಹತ್ಯೆ ಘಟನೆಯನ್ನು ಪೊಲೀಸರು ತನಿಖೆ ನಡುಸುತ್ತಿದ್ದಾರೆ; ಆದರೆ ಆತ್ಮಹತ್ಯೆಗೆ ಕಾರಣವೇನೆಂಬುದು ಮಾತ್ರ ಈ ತನಕ ಗೊತ್ತಾಗಿಲ್ಲ. 

ಈ ತಿಂಗಳ ಆದಿಯಲ್ಲಿ  ಜಾರ್ಖಂಡ್‌ನ‌ ಹಜಾರಿಬಾಗ್‌ನಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಒಂದೇ ಕುಟುಂಬದ ಆರು ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅದೇ ರೀತಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಣಕಾಸು ಬಿಕ್ಕಟ್ಟೇ ಈ ಘಟನೆಗಳಿಗೆ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 

ದಿಲ್ಲಿಯ ಬುರಾರಿಯ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆ ನಿಗೂಢ ಪ್ರಕರಣವಾಗಿತ್ತು. ಅದಾಗಿ ಕೇವಲ ಒಂದು ತಿಂಗಳ ಒಳಗೆ ಜಾರ್ಖಂಡ್‌ ರಾಜಧಾನಿಯಲ್ಲಿ  ಈ ಎರಡು ಘಟನೆಗಳು ಸಂಭವಿಸಿವೆ. 

ದಿಲ್ಲಿಯ ಬುರಾರಿಯಲ್ಲಿನ ಭಾಟಿಯಾ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆಗೆ ಮೋಕ್ಷ  ಪಡೆಯುವ ಅಪೇಕ್ಷೆ ಕಾರಣವೆಂದು ಕೂಡ ಶಂಕಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next