Advertisement

ಕುಡಿವ ನೀರಿನ ಯೋಜನೆಗೆ 7.70 ಕೋಟಿ ರೂ. ಅನುದಾನ

04:33 PM Mar 12, 2020 | Suhan S |

ಚಿಕ್ಕೋಡಿ: ನೆರೆಯಿಂದ ಹಾನಿಗೊಳಗಾದ ತಾಲೂಕಿನ ಯಡೂರ, ಮಾಂಜರಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ 7.70 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.

Advertisement

ಬುಧವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಾಂಜರಿ ಹಾಗೂ ಮಾಂಜರಿವಾಡಿ ಮತ್ತು ಯಡೂರ ಹಾಗೂ ಇತರ ಎರಡು ಗ್ರಾಮಗಳಾದ ಯಡುರುವಾಡಿ, ಹೊಸಯಡೂರ ಗ್ರಾಮಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಅನುದಾನ ಮಂಜೂರಾಗಿದೆ ಎಂದರು.

ಈ ಹಿಂದೆ ಸನ್‌ 2003-04ರಲ್ಲಿ ಈ ಯೋಜನೆ ಮಂಜೂರಾಗಿತ್ತು. ಆದರೆ ಕಳೆದ ಅಗಸ್ಟ್‌ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ ನದಿ ಪಾತ್ರದಲ್ಲಿ ಈ ಎರಡು ಗ್ರಾಮ ಪಂಚಾಯತಿಗಳಲ್ಲಿಯ ಕುಡಿಯುವ ನೀರಿನ ಯೋಜನೆಯ ಪಂಪ್‌ಸೆಟ್‌ಗಳು, ಪೈಪ್‌ಲೈನ್‌ಗಳು ಹಾಗೂ ವಿದ್ಯುತ್‌ ಉಪಕರಣಗಳು ಪೂರ್ತಿ ಹಾಳಾಗಿದ್ದವು. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯದಿಂದ ಭಾರಿ ತೊಂದರೆಯಾಗಿತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪನವರು ನೆರೆ ಹಾವಳಿ ವೀಕ್ಷಣೆಗೆ ಈ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಸಚಿವರು ಮನವಿಗೆ ಸ್ಪಂದಿ ಸಿ ಹಾಗೂ ಅವರು ಖುದ್ದಾಗಿ ಪರಿಶೀಲಿಸಿದ್ದರು. ಸಚಿವರು ಯೋಜನೆಗೆ ಸರಕಾರದಿಂದ ತ್ವರಿತವಾಗಿ ಮಂಜೂರಾತಿ ನೀಡಿವದಾಗಿ ವಾಗ್ಧಾನ ನೀಡಿದ್ದರು. ಅದರಂತೆ ಮಾಂಜರಿ ಮತ್ತು ಮಾಂಜರಿವಾಡಿ ಗ್ರಾಮಗಳಿಗೆ 4 ಕೋಟಿ ಹಾಗೂ ಯಡೂರ ಮತ್ತು ಇತರೆ ಎರಡು(ಯಡುರುವಾಡಿ, ಹೊಸಯಡುರ) ಗ್ರಾಮಗಳಿಗೆ 3.70 ಕೋಟಿ ಅನುದಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹೊಸ ಕುಡಿಯುವ ನೀರಿನ ಯೋಜನಗೆ ಅನುಮೋದನೆ ಸಿಕ್ಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next