Advertisement

Arrested: ಜುಗಾರಿ ಆಟ ಆಡುತ್ತಿದ್ದ 6 ಮಂದಿ ಸೆರೆ

09:01 PM Oct 12, 2024 | Team Udayavani |

ಮಂಗಳೂರು: ಪಚ್ಚನಾಡಿ ಗ್ರಾಮದ ವೈದ್ಯನಾಥ ನಗರದ ಸಾರ್ವಜನಿಕ ಖಾಲಿ ಜಾಗದಲ್ಲಿ ಇಸ್ಪಿಟ್‌ ಎಲೆಗಳನ್ನು ಬಳಸಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿದ್ದ ಆರು ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಖಚಿತ ಮಾಹಿತಿ ಮೇಲೆಯ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿದ್ದಾರೆ. ಜೀಪನ್ನು ದೂರ ನಿಲ್ಲಿಸಿ ಅವರ ಹತ್ತಿರ ಹೋಗುತ್ತಿರುವಾಗ ಜುಗಾರಿ ಆಟದಲ್ಲಿ ನಿರತರಾಗಿದ್ದವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳನ್ನು ಸುತ್ತುವರೆದು ಬಂಧಿಸಿದ್ದಾರೆ. ಅವರಿಂದ 4,270 ರೂ. ನಗದು, ಇಸ್ಪಿಟ್‌ ಎಲೆ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next