Advertisement

ರಾಜಸ್ಥಾನದಲ್ಲಿ “ಆನೆ ಜೇಬು’ಈಗ ಖಾಲಿ

08:45 AM Sep 19, 2019 | Team Udayavani |

ಜೈಪುರ/ಲಕ್ನೋ: ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿರುವ ಬಿಎಸ್‌ಪಿಯ ಎಲ್ಲಾ ಆರು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಬಿಎಸ್‌ಪಿ ನಾಯಕಿ ಮಾಯಾವತಿಗೆ ಬಲು ದೊಡ್ಡ ಹಿನ್ನಡೆಯಾಗಿದೆ. ಇದೊಂದು ಮೋಸ ಎಂದು ಬಣ್ಣಿಸಿರುವ ಅವರು, ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ನಂಬಲು ಅನರ್ಹವಾಗಿರುವ ಪಕ್ಷ ಎಂಬುದು ಸಾಬೀತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಯಿಂದಾಗಿ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 106ಕ್ಕೆ ಏರಿಕೆಯಾಗಿದೆ. ಸೋಮವಾರ ತಡರಾತ್ರಿ ಬಿಎಸ್‌ಪಿ ಶಾಸಕರು ವಿಧಾನಸ ಭಾಧ್ಯಕ್ಷ ಸಿ.ಪಿ.ಜೋಶಿ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಸೇರುವ ನಿರ್ಧಾರದ ಬಗ್ಗೆ ಪತ್ರ ಸಲ್ಲಿಸಿದರು. ಇದಕ್ಕಿಂತ ಮೊದಲು ಅಶೋಕ್‌ ಗೆಹೊÉàಟ್‌ ನಾಯಕತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಬಿಎಸ್‌ಪಿ ಬಾಹ್ಯ ಬೆಂಬಲ ನೀಡುತ್ತಿತ್ತು. ಇದರ ಜತೆಗೆ 13 ಪಕ್ಷೇತರ ಶಾಸಕರ ಪೈಕಿ 12 ಮಂದಿ ಸರ್ಕಾರಕ್ಕೆ ಈಗಾಗಲೇ ಬೆಂಬಲ ನೀಡುತ್ತಿದ್ದಾರೆ.

Advertisement

ರಾಜಸ್ಥಾನದಲ್ಲಿ ಹೀಗೆ ಆಗುತ್ತಿರುವುದು 2ನೇ ಬಾರಿ. 2009ರಲ್ಲಿ ಅಶೋಕ್‌ ಗೆಹೊÉàಟ್‌ 6 ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಪಕ್ಷದ ಸರ್ಕಾರವನ್ನು ಗಟ್ಟಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next