Advertisement

ಮಂಗಳೂರು: 6.39 ಲಕ್ಷ ರೂ. ಮೌಲ್ಯದ ಮೊಬೈಲ್‌ ಖರೀದಿಸಿ ಹಣ ನೀಡದೆ ವಂಚನೆ

08:59 PM Oct 20, 2022 | Team Udayavani |

ಮಂಗಳೂರು: ನಗರದ ಹಳೆಯ ಸೆಂಟ್ರಲ್‌ ಮಾರ್ಕೆಟ್‌ ಬಳಿ ಮೊಬೈಲ್‌ ಅಂಗಡಿ ಹೊಂದಿರುವ ಶೇಖ್‌ ರಿಯಾಜ್‌ ಎಂಬವರಿಂದ ಕುಂದಾಪುರ ಗಂಗೊಳ್ಳಿಯಲ್ಲಿ ಅಂಗಡಿ ಹೊಂದಿರುವ ಗಯಾಜ್‌ ಎಂಬಾತ 6.39 ಲಕ್ಷ ರೂ. ಮೌಲ್ಯದ ಮೊಬೈಲ್‌ ಖರೀದಿಸಿ ಹಣ ನೀಡದೆ ವಂಚಿಸಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

2021ರ ಫೆ.12ರಂದು ಗಯಾಜ್‌ ಅಂಗಡಿಗೆ ಬಂದು 6.39 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 62 ಮೊಬೈಲ್‌ ಖರೀದಿಸಿದ್ದ. ರಿಯಾಜ್‌ಗೆ ಅತನ ಪರಿಚಯ ಮೊದಲೇ ಇತ್ತು ಹಾಗೂ ಆತ ಅವರಿಂದಲೇ ಮೊಬೈಲ್‌ ಖರೀದಿಸುತ್ತಿದ್ದ. ಮೊಬೈಲ್‌ ಖರೀದಿಸಿದ ಬಳಿಕ ಸ್ವಲ್ಪ ಹಣವನ್ನು ಎಟಿಎಂನಿಂದ ವಿದ್‌ಡ್ರಾ ಮಾಡಿ ತಂದುಕೊಡುವುದಾಗಿ ಹೇಳಿ ಹೋದಾತ ಹಣವನ್ನೂ ನೀಡದೆ, ಮೊಬೈಲ್‌ ಹಿಂದಿರುಗಿಸದೆ ತಪ್ಪಿಸಿಕೊಂಡಿದ್ದ.

ಆತನಿಗೆ ಕರೆಮಾಡಿದಾಗ ಸ್ವಿಚ್‌ಆಫ್‌ ಆಗಿತ್ತು. ಮರುದಿನ ಮತ್ತೆ ಕರೆಮಾಡಿದಾಗ ಒಂದು ಕಡೆಯಿಂದ ಹಣ ಬರಲು ಬಾಕಿ ಇದೆ ಅದು ಬಂದ ಮೇಲೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ. ಬಳಿಕ ಹೀಗೆ ದಿನ ದೂಡುತ್ತಿದ್ದ. ನಂತರದ ದಿನಗಳಲ್ಲಿ ಪಿರ್ಯಾದಿದಾರರು ಅಂಗಡಿಯಲ್ಲಿದ್ದ ಸಿಸಿ ಟಿವಿ ಪರಿಶೀಲಿಸಿದಾಗ 57 ಸಾವಿರ ರೂ. ಬೆಲೆ ಬಾಳುವ 3 ಮೊಬೈಲ್‌ಗ‌ಳನ್ನೂ ಯಾರಿಗೂ ತಿಳಿಯದಂತೆ ಗಯಾಜ್‌ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ಖರೀದಿಸಿದ ಮೊಬೈಲ್‌ಗ‌ಳ ಹಣ ಕೊಡದೆ ಆತ ವಂಚನೆ ಮಾಡಿವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next