Advertisement

54ನೇ ರ‍್ಯಾಂಕ್ ಪಡೆದ ವಿಜಯಪುರದ ಅಭಿಷೇಕ್‍ ಎನ್‍ಡಿಎಗೆ ಆಯ್ಕೆ

07:05 PM Sep 16, 2020 | sudhir |

ವಿಜಯಪುರ : ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ಗ್ರಾಮದ ಅಭಿಷೇಕ್ ಖ್ಯಾಡಿ ಪರೀಕ್ಷೆಯಲ್ಲಿ 54ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Advertisement

ದೇಶದ ವಿವಿಧ ಭಾಗದಲ್ಲಿ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಪ್ರವೇಶ ಅರ್ಹತಾ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 600 ವಿದ್ಯಾರ್ಥಿಗಳನ್ನು ವಿವಿಧ ಪರೀಕ್ಷಾ ಹಂತದಲ್ಲಿಆಯ್ಕೆ ಮಾಡಲಾಗುತ್ತದೆ. ಈ ಎಲ್ಲ ಹಂತವನ್ನೂ ಸಮರ್ಥವಾಗಿ ಎದುರಿಸಿರುವ ಚಿಮ್ಮಲಗಿ-1 ನಿವಾಸಿ ಅಭಿಷೇಕ್ 54ನೇ ರ‍್ಯಾಂಕ್ ಸಾಧೆನ ಮಾಡಿದ್ದಾನೆ. ನೌಕಾಪಡೆ ಸೇವೆ ಸಲ್ಲಿಸುವ ಆಸಕ್ತಿಯಿಂದ ನಡೆಸಿದ ತಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಅಭಿಷೇಕ್ ಸಂತೃಪ್ತಿ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next