Advertisement

ಮೈಸೂರು ಜಿಲ್ಲೆಯಲ್ಲಿ 51 ನಾಮಪತ್ರ ಸಲ್ಲಿಕೆ

01:40 PM Apr 18, 2023 | Team Udayavani |

ಮೈಸೂರು: ವರುಣಾದಿಂದ ವಸತಿ ಸಚಿವ, ಬಿಜೆ ಪಿಯ ವಿ.ಸೋಮಣ್ಣ, ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕ, ಜೆಡಿಎಸ್‌ನ ಜಿ.ಟಿ.ದೇವೇಗೌಡ, ಕಾಂಗ್ರೆಸ್ಸಿನ ಮಾವಿನಹಳ್ಳಿ ಸಿದ್ದೇಗೌಡ, ಚಾಮರಾಜ ಕ್ಷೇತ್ರದಿಂದ ಶಾಸಕ ಬಿಜೆಪಿಯ ಎಲ್‌.ನಾಗೇಂದ್ರ, ಪಿರಿಯಾಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ಸಿನ ಕೆ.ವೆಂಕಟೇಶ್‌, ಎಚ್‌. ಡಿ.ಕೋಟೆ ಕ್ಷೇತ್ರದಿಂದ ಶಾಸಕ, ಕಾಂಗ್ರೆಸ್ಸಿನ ಅನಿಲ್‌ ಚಿಕ್ಕಮಾದು, ಹುಣಸೂರಿನಿಂದ ಕಾಂಗ್ರೆಸ್‌ ಅಭ್ಯ ರ್ಥಿ, ಶಾಸಕ ಎಚ್‌.ಪಿ.ಮಂಜುನಾಥ್‌, ಕೃಷ್ಣರಾಜ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಅವರು ಸೇರಿದಂತೆ ಅನೇಕರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿದರು.

Advertisement

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ 51 ನಾಮಪತ್ರಗಳು ಸಲ್ಲಿಕೆಯಾಗಿವೆ. ತಿ.ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ, ನರಸಿಂಹರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯ ರ್ಥಿಯಾಗಿ ಸಂದೇಶ ಸ್ವಾಮಿ, ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಶಾಸಕ ಕೆ.ವೆಂಕಟೇಶ್‌, ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಅವರು ನಾಮಪತ್ರ ಸಲ್ಲಿಸಿದರು.

ಪಿರಿಯಾಪಟ್ಟಣ ಕ್ಷೇತ್ರದಿಂದ ಅಮ್‌ ಆದ್ಮಿ ಪಾರ್ಟಿಯಿಂದ ರಾಜಶೇಖರ್‌, ಕೆ.ಆರ್‌.ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಡಿ.ರವಿಶಂಕರ್‌, ಬಿಜೆಪಿಯಿಂದ ಎಚ್‌.ಟಿ.ವೆಂಕಟೇಶ್‌, ಕೆ.ಆರ್‌. ಎಸ್‌. ಪಕ್ಷದಿಂದ ತಿಮ್ಮಾಬೋವಿ, ಪಕ್ಷೇತರ ಅಭ್ಯರ್ಥಿ ಗಳಾಗಿ ಬೀರೇಶ್‌, ಪಿ.ಎಸ್‌.ಯಡಿಯೂರಪ್ಪ ಹಾಗೂ ಉಮೇಶ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ. ‌ಎಚ್‌.ಡಿ.ಕೋಟೆ ಕ್ಷೇತ್ರದಿಂದ ಉತ್ತಮ ಪ್ರಜಾ ಕೀಯ ಪಾರ್ಟಿಯಿಂದ ಎಚ್‌.ಎಂ.ನಾಗೇಶ, ಜೆಡಿಎಸ್‌ನಿಂದ ಸಿ.ಜಯಪ್ರಕಾಶ್‌, ಸಮಾಜವಾದಿ ಜನತಾ ಪಾರ್ಟಿಯಿಂದ ಕೆ.ವಿ.ರಾಜು, ಪಕ್ಷೇತರ ಅಭ್ಯರ್ಥಿಗಳಾಗಿ ಎ.ಎಂ.ಬಾಬು, ಗಿರಿಜಾಂಬ ಅವರು ನಾಮಪತ್ರ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎಸ್‌.ಹರೀಶ್‌, ಸಮಾಜವಾದಿ ಜನತಾ ಪಾರ್ಟಿಯಿಂದ ಮೆಹುಲ್‌ ಜೆ. ಪಟೇಲ್, ಅಮ್‌ ಆದ್ಮಿ ಪಾರ್ಟಿಯಿಂದ ಕಿರಣ್‌ ನಾಗೇಶ್‌ ಕಲ್ಯಾಣಿ, ಪಕ್ಷೇತರ ಅಭ್ಯರ್ಥಿಯಾಗಿ ಬಿ. ಪ್ರಕಾಶ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕೃಷ್ಣರಾಜ ಕ್ಷೇತ್ರದಿಂದ ಅಮ್‌ ಆದ್ಮಿ ಪಾರ್ಟಿಯಿಂದ ಎ.ಎಸ್‌.ಸತೀಶ್‌, ಇಂಡಿಯನ್‌ ಮೂವ್‌ಮೆಂಟ್‌ ಪಕ್ಷದಿಂದ ಎಂ.ಲಿಂಗರಾಜು, ಪಕ್ಷೇತರ ಅಭ್ಯ ರ್ಥಿಯಾಗಿ ಎ.ಎಸ್‌.ಸತೀಶ್‌ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಡಿ.ಪಿ.ಕೆ.ಪರಮೇಶ್‌, ಕಂಟ್ರಿ ಸಿಟಿಜನ್‌ ಪಾರ್ಟಿಯಿಂದ ಎಂ.ಪಂಚಲಿಂಗು ಅವರು ನಾಮಪತ್ರ ಸಲ್ಲಿಸಿದ್ದಾರೆ.

ನರಸಿಂಹರಾಜ ಕ್ಷೇತ್ರದಿಂದ ರಿಪಬ್ಲಿಕನ್‌ ಪಾರ್ಟಿ ಆಪ್‌ ಇಂಡಿಯಾ (ಕರ್ನಾಟಕ)ದಿಂದ ವಿನೋದ್‌ ಎಂ.ಚಾಕೊ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ವಿ. ಲಿಂಗರಾಜು, ಗಿರಿಧರ್‌ ನಾಮಪತ್ರ ಸಲ್ಲಿಸಿದ್ದಾರೆ. ವರುಣಾ ಕ್ಷೇತ್ರದಿಂದ ಸಮಾಜವಾದಿ ಜನತಾ ಪಾರ್ಟಿಯಿಂದ (ಕರ್ನಾಟಕ) ಕೆ.ನಾಗೇಶ್‌ ನಾಯ್ಕ, ಇಂಡಿಯನ್‌ ನ್ಯೂ ಕಾಂಗ್ರೆಸ್‌ನಿಂದ ಗುರುಲಿಂಗಯ್ಯ, ಕನ್ನಡ ದೇಶದ ಪಕ್ಷದಿಂದ ಅರುಣ್‌ ಸಿಂಗ್‌, ತಿ.ನರಸೀಪುರ ಕ್ಷೇತ್ರದಿಂದ ಜೆಡಿಎಸ್‌ನಿಂದ ಎಂ. ಅಶ್ವಿ‌ನ್‌ ಕುಮಾರ್‌, ಆಮ್‌ ಆದ್ಮಿ ಪಾರ್ಟಿಯಿಂದ ಎಂ.ಸಿದ್ದರಾಜು ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next