Advertisement
ಸಂಜೆ 5ಕ್ಕೆ ಆಗಮಿಸುವ ಮುಖ್ಯಮಂತ್ರಿ ಯವರು ಯಾತ್ರಾರ್ಥಿ ಗಳು ದರ್ಶನ ಪಡೆಯುವ ನೂತನ ಮಾರ್ಗ “ವಿಶ್ವಪಥ’ವನ್ನು ಉದ್ಘಾಟಿಸಿ ದೇವರ ದರ್ಶನ ಪಡೆಯುವರು. ರಾಜಾಂಗಣದಲ್ಲಿ ಏರ್ಪಡಿಸಲಾದ ಗ್ರಾಮೀಣ ಕರಕುಶಲ ಮತ್ತು ಕೈಮಗ್ಗದ ಮಳಿಗೆಯನ್ನು ಉದ್ಘಾಟಿಸಿ ಪಂಚ ಶತಮಾನೋತ್ಸವದ ಸಭೆಯಲ್ಲಿ ಪಾಲ್ಗೊಳ್ಳುವರು. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು, ಶಾಸಕರು ಭಾಗವಹಿಸುವರು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಉಡುಪಿ: ಶ್ರೀಕೃಷ್ಣ ಮಠದ ಪೂಜಾ ಪದ್ಧತಿ ವಿಸ್ತರಣೆಗೊಳ್ಳುತ್ತ ಬಂದಿರುವುದಾಗಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.
ರವಿವಾರ ರಾಜಾಂಗಣದಲ್ಲಿ ನಡೆದ ದ್ವೆ„ವಾರ್ಷಿಕ ಪರ್ಯಾಯ ಪದ್ಧತಿಯ ಪಂಚ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಸುಮಾರು 800 ವರ್ಷಗಳ ಹಿಂದೆ ಪೂಜಾ ವಿಧಿವಿಧಾನಗಳು ಮಾತ್ರ ಇದ್ದವು. ವಾದಿರಾಜರ ಕಾಲದಲ್ಲಿ ಎರಡು ತಿಂಗಳಿನಿಂದ ಎರಡು ವರ್ಷಗಳಿಗೆ ವಿಸ್ತರಣೆಯಾಯಿತು. ಈಗ ಉಡುಪಿಯ
ಉತ್ಸವವಾಗಿದೆ ಎಂದರು.
ಕೆನರಾ ಬ್ಯಾಂಕ್ ಮಹಾಪ್ರಬಂಧಕ ಮಂಗಳೂರಿನ ಯೋಗೀಶ ಆಚಾರ್ಯ, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮುಖ್ಯ ಅತಿಥಿಗಳಾಗಿದ್ದರು. ವಿವಿಧ ಸಾಧಕರನ್ನು ಸಮ್ಮಾನಿಸಲಾಯಿತು.