Advertisement

ಹುಣಸೂರು ನಗರಸಭೆ ಕಂದಾಯ ಅಧಿಕಾರಿಗೆ 5 ಸಾವಿರ ದಂಡ

07:27 PM Feb 12, 2022 | Team Udayavani |

ಹುಣಸೂರು: ಸಕಾಲದಲ್ಲಿ ಮಾಹಿತಿ ನೀಡಲು ವಿಫಲವಾದ ಹುಣಸೂರು ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಕಂದಾಯಾಧಿಕಾರಿ ನಂಜುಂಡಸ್ವಾಮಿಯವರಿಗೆ ಕರ್ನಾಟಕ ಮಾಹಿತಿ ಆಯೋಗ 5  ಸಾವಿರ ರೂಗಳ ದಂಡ ವಿಧಿಸಿದೆ.

Advertisement

ಹುಣಸೂರು ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊAದರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣದ ಪರವಾನಗಿ ಹಾಗೂ ನಕ್ಷೆ ಕಾಫಿಯ ಧೃಡೀಕೃತ ದಾಖಲೆಗಾಗಿ ತಾಲೂಕು ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಎಚ್.ಕೆ.ಸುರೇಶ್ ಎಂಬುವವರು ೨೦೨೦ ಡಿಸೆಂಬರ್ ೭ ರಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ವರ್ಷವಾದರೂ ಮಾಹಿತಿ ನೀಡಿರಲಿಲ್ಲ. ಪೌರಾಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದರ ವಿರುದ್ದ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಡಾ.ಕೆ.ಇ.ಕುಮಾರಸ್ವಾಮಿಯವರು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಸಮರ್ಪಕ ಮಾಹಿತಿ ನೀಡಲು ವಿಫಲವಾದ ಸಾರ್ವಜನಿಕ ಮಾಹಿತಿ ಅಧಿಕಾರಿ ನಂಜುAಡಸ್ವಾಮಿಯವರಿಗೆ ೫ ಸಾವಿರ ರೂ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ನಂಜುAಡಸ್ವಾಮಿಯವರ ವೇತನದಲ್ಲಿ ಕಟಾವು ಮಾಡಿಕೊಂಡು ಖಜಾನೆಗೆ ಜಮೆ ಮಾಡುವಂತೆ ಪೌರಾಯುಕ್ತರಿಗೆ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next