Advertisement

ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರ

08:39 PM May 17, 2021 | Team Udayavani |

ಸಸಿಹಿತ್ಲು : ಅಂತಾರಾಷ್ಟ್ರೀಯವಾಗಿ ಬೆಳಕಿಗೆ ಬಂದಿರುವ ಸಸಿಹಿತ್ಲು ಮುಂಡ ಬೀಚ್ ಕಡಲಿಗೆ ಸೇರಿ ಸುಮಾರು 20 ಕೋ.ರೂ. ನಷ್ಟವಾಗಿದ್ದು ಕಡಲ ತೀರದಲ್ಲಿನ ಮನೆಗಳು ಸಹ ಅಪಾಯದ ಅಂಚಿನಲ್ಲಿದೆ, ಇದಕ್ಕಾಗಿ ರಾಜ್ಯ ಸರಕಾರವು 50 ಕೋ.ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು, ಕಾಂಗ್ರೆಸ್ ಪಕ್ಷವು ಜನರ ಸಂಕಷ್ಟಕ್ಕೆ ಮುಕ್ತವಾಗಿ ನೆರವು ನೀಡುತ್ತಿದ್ದು, ಇದರಲ್ಲಿ ರಾಜಕೀಯವಿಲ್ಲ ಬದಲಾಗಿ ಜನರ ಹಕ್ಕನ್ನು ಸರಕಾರದ ಮುಂದೆ ಮಂಡಿಸಲು ಪರೋಕ್ಷವಾಗಿ ನೆರವಾಗುತ್ತೇವೆ ಎಂದು ಮಾಜಿ ಸಚಿವ ಕ.ಅಭಯಚಂದ್ರ ಜೈನ್ ಹೇಳಿದರು.

Advertisement

ಸಸಿಹಿತ್ಲುವಿನ ಬೀಚ್ ಪ್ರದೇಶ ಹಾಗೂ ಕೊಳುವೈಲ್‌ನ ಕೃಷಿ ಪ್ರದೇಶಕ್ಕೆ ಹಾನಿಯಾಗಿರುವ ಪ್ರದೇಶಕ್ಕೆ ಸೋಮವಾರ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವಿಶೇಷ ನಿಯೋಗದ ಮೂಲಕ ಪರಿಶೀಲನೆ ನಡೆಸಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಕ್ಷೇತ್ರದ ಉಸ್ತುವಾರಿ ಮಿಥುನ್ ರೈ, ಕೆಪಿಸಿಸಿ ವಕ್ತಾರ ಎಚ್. ವಸಂತ ಬೆರ್ನಾಡ್, ಕೆಪಿಸಿಸಿ ಹಿಂದುಳಿದ ವಗ್‌ದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಜಂಯ ಮಟ್ಟು, ಯುವ ಅಧ್ಯಕ್ಷ ಅಶೋಕ್ ಪೂಜಾರ್, ಮೂಲ್ಕಿ ನ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್, ಪುತ್ತುಬಾವ, ಹಕೀಂ ಕಾರ್ನಾಡು, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಚಂದ್ರಕುಮಾರ್, ಧನ್‌ರಾಜ್ ಕೋಟ್ಯಾನ್, ಅಬ್ದುಲ್ ಅಜೀಜ್, ಅನಿಲ್ ಪೂಜಾರಿ, ಸತೀಶ್ ಕೋಟ್ಯಾನ್, ಪ್ರಮುಖರಾದ ಲೋಕೇಶ್ ಕೊಟ್ಯಾನ್, ನವೀನ್ ಕೋಟ್ಯಾನ್ ಸಸಿಹಿತ್ಲು ಹಾಗೂ ಕೊಳುವೈಲಿನ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next