Advertisement

ಕಂಪ್ಯೂಟರ್‌ ಸಾಕ್ಷರತೆಗೆ 5 ಸಾವಿರ ರೂ. ಪ್ರೋತ್ಸಾಹ

11:19 PM Jan 24, 2023 | Team Udayavani |

ಬೆಂಗಳೂರು: ಕಂಪ್ಯೂಟರ್‌ ಸಾಕ್ಷರತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸರಕಾರಿ ನೌಕರರಿಗೆ ಷರತ್ತು ಬದ್ಧ ಪ್ರೋತ್ಸಾಹ ಧನ ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.

Advertisement

ಕರ್ನಾಟಕ ಸಿವಿಲ್‌ ಸೇವಾ ನಿಯಮ ಜಾರಿಗೆ ಬಂದ 2012ರ ಮಾರ್ಚ್‌ 22ರಿಂದ 2021ರ ಎಪ್ರಿಲ್‌ 17ರೊಳಗೆ ಕಂಪ್ಯೂಟರ್‌ ಸಾಕ್ಷರತೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಈ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ ಎಂದು ಸರಕಾರ ಹೇಳಿದೆ.

ಈ ಅವಧಿಯಲ್ಲಿ ಕಂಪ್ಯೂಟರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಸರಕಾರ ಅಥವಾ ಸರಕಾರದಿಂದ ಅನುಮೋದಿತ ಏಜೆನ್ಸಿ ನೀಡಿರುವ ಡಿಜಿಟಲ್‌ ಸಹಿ ಹೊಂದಿರುವ ಪ್ರಮಾಣ ಪತ್ರವನ್ನು ಆಧಾರಿಸಿ ಪ್ರೋತ್ಸಾಹ ಧನ ಮಂಜೂರು ಮಾಡುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next