Advertisement

ಸಂಭ್ರಮಾಚರಣೆಯಲ್ಲ: ನ್ಯಾ|ಗೊಗೊಯ್‌ ಸ್ಪಷ್ಟನೆ

12:37 AM Dec 11, 2021 | Team Udayavani |

ಹೊಸದಿಲ್ಲಿ: ಅಯೋಧ್ಯೆ ತೀರ್ಪು ನೀಡಿದ ದಿನ ತಾವು, ಸುಪ್ರೀಂ ನ್ಯಾಯಮೂರ್ತಿಗಳ ಜತೆೆ ಸ್ಟಾರ್‌ ಹೊಟೇಲೊಂದ ರಲ್ಲಿ ಔತಣಕೂಟದಲ್ಲಿ ಭಾಗಿಯಾಗಿ­ದ್ದರ ಬಗ್ಗೆ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯ­ಮೂರ್ತಿ ರಂಜನ್‌ ಗೊಗೊಯ್‌ ಸ್ಪಷ್ಟನೆ ನೀಡಿದ್ದಾರೆ.

Advertisement

“ನಾವು ನ್ಯಾಯಮೂರ್ತಿಗಳು ಅಯೋಧ್ಯೆ ತೀರ್ಪಿಗಾಗಿ ಬರೋ ಬ್ಬರಿ 4 ತಿಂಗಳ ಕಾಲ ಕಠಿನ ಪರಿಶ್ರಮದಿಂದ ಕೆಲಸ ಮಾಡಿದ್ದೆವು. ಅಷ್ಟೊಂದು ಕೆಲಸ ಮಾಡಿದ್ದ ನಾವು, ತೀರ್ಪಿನ ಅನಂತರದಲ್ಲಿ ದೊಡ್ಡ ಕೆಲಸ ಮುಗಿಯಿತೆಂಬ ಖುಷಿಯಲ್ಲಿ ಔತಣಕೂಟ ನಡೆಸಿದ್ದೆವು. ನಾನೇ ಅವರೆಲ್ಲರನ್ನೂ ತಾಜ್‌ ಮಾನ್ಸಿಂಗ್‌ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದೆ. ಅದೊಂದು ಔಪಚಾರಿಕ ಕೂಟ, ಅಯೋಧ್ಯೆ ತೀರ್ಪಿನ ಬಗ್ಗೆ ಸಂಭ್ರಮಾಚರಣೆಯಾಗಿರಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಡಿ: ಶೋಭಾ

ಇತ್ತೀಚೆಗೆ ಮಾಜಿ ಸಿಜೆಐ ನ್ಯಾ| ಗೊಗೊಯ್‌ ಅವರ ಆತ್ಮಕಥನ ಬಿಡುಗಡೆಯಾಗಿದೆ. ಅದರಲ್ಲಿ ಹೊಟೇಲ್‌ನಲ್ಲಿ ನ್ಯಾ| ಗೊಗೊಯ್‌ ಔತಣಕೂಟ ನಡೆಸಿದ್ದ ಫೋಟೋ ಅಚ್ಚಾಗಿದೆ. ಈ ಬಗ್ಗೆ ಅನೇಕ ಚರ್ಚೆಯಾಗಿದ್ದವು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next