Advertisement

5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಕೇಸ್; ಆರೋಪಿ ದೋಷಮುಕ್ತಿ

08:39 AM Mar 06, 2019 | Team Udayavani |

ಕುಂದಾಪುರ: ಚೆಕ್ ಅಮಾನ್ಯ ಪ್ರಕರಣದ ಆರೋಪಿ ರವಿಚಂದ್ರ ಎಂಬವರು ಆರೋಪಮುಕ್ತಗೊಂಡಿದ್ದಾರೆ. ಐಸಿಐಸಿಐ ಮಣಿಪಾಲ ಶಾಖೆಯ 5 ಲಕ್ಷ ರೂಪಾಯಿ ಮೊಬಲಗಿಗೆ ಸಂಬಂಧಿಸಿದ ಮೂರು ಚೆಕ್ ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ಉಡುಪಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

Advertisement

ದೂರುದಾರರ ಬಳಿ ಚೆಕ್ ಹೊರತುಪಡಿಸಿ ಬೇರಾವ ದಾಖಲೆಗಳು ಇದ್ದಿರಲಿಲ್ಲ. ಆರೋಪಿಯು ದೂರುದಾರರಿಂದ ಸಾಲ ಪಡೆದಿದ್ದಾರೆಂಬ ಬಗ್ಗೆ ರುಜುವಾತಾಗಿಲ್ಲ. ದೂರುದಾರರು ಬೇರೆಯವರಿಗೆ ನೀಡಿದ ಮೂರು ಚೆಕ್ ಗಳನ್ನು ದುರುಪಯೋಗಪಡಿಸಿಕೊಂಡಿರಬಹುದೆಂಬ ಸಾಧ್ಯತೆ ಪ್ರಕರಣದಲ್ಲಿ ಕಂಡು ಬಂದಿತ್ತು.

ಈ ಎಲ್ಲಾ ವಸ್ತುಸ್ಥಿತಿಯ ಹಿನ್ನೆಲೆಯಲ್ಲಿ ಸರ್ವೋಚ್ಛನ್ಯಾಯಾಲಯದ ತೀರ್ಪನ್ನು ಗಮನದಲ್ಲಿರಿಸಿಕೊಂಡು ಉಡುಪಿ ಮೂರನೇ ಹೆಚ್ಚುವರಿ ನ್ಯಾಯಾಧೀಶ ರಾಮಪ್ರಶಾಂತ್ ಎಂ.ಎನ್. ಆರೋಪಿಯನ್ನು ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next