Advertisement

ಮಾವಿನ ಹಣ್ಣು ತುಂಬಿದ್ದ ಟ್ರಕ್ ಪಲ್ಟಿ: ಐವರು ಕಾರ್ಮಿಕರು ದುರ್ಮರಣ, 11 ಜನರಿಗೆ ಗಾಯ

08:13 AM May 11, 2020 | Mithun PG |

ಮಧ್ಯಪ್ರದೇಶ: ಟ್ರಕ್ ಪಲ್ಟಿಯಾದ ಕಾರಣ ಐವರು ಕಾರ್ಮಿಕರು ಮೃತಪಟ್ಟು 11 ಜನ ಗಂಭೀರ ಗಾಯಗೊಂಡ ಘಟನೆ ನರಂಸಿಂಗಪುರದ ಪಾಥಾ ಎಂಬ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

Advertisement

ಮಾವಿನ ಹಣ್ಣು ತುಂಬಿದ್ದ  ಟ್ರಕ್‌ನಲ್ಲಿ ಈ ಕಾರ್ಮಿಕರು ಹೈದರಾಬಾದ್‌ನಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಟ್ರಕ್‌ನಲ್ಲಿ ಸುಮಾರು ಒಟ್ಟು 18 ಮಂದಿ ಕಾರ್ಮಿಕರಿದ್ದರು. ನರಸಿಂಗ್‌ಪುರದ ಪಾಥಾ ಗ್ರಾಮದ ಬಳಿ ಟ್ರಕ್ ಪಲ್ಟಿಯಾದಾಗ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು 11 ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ನರಸಿಂಗ್‌ಪುರದ ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ಹೇಳಿದ್ದಾರೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next