ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಅಧಿಕ ಲಾಭಾಂಶ ಬರುವುದಾಗಿ ಹೇಳಿ ಸೈಬರ್ ವಂಚಕರು, ವ್ಯಾಪಾರಿಯೊಬ್ಬರಿಂದ ಬರೋ ಬ್ಬರಿ 5.18 ಕೋಟಿ ರೂ.ಪಡೆದು ವಂಚಿಸಿದ್ದಾರೆ. ಈ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ವ್ಯಾಪಾರಿ ಅಶೋಕ್ ಎಂಬುವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
ದೂರುದಾರರ ವಾಟ್ಸ್ಆ್ಯಪ್ಗೆ ಕೆಲ ದಿನಗಳ ಹಿಂದಷ್ಟೇ ಸಂದೇಶವೊಂದು ಬಂದಿದ್ದು, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ, ದುಪ್ಪಟ್ಟು ಲಾಭ ಗಳಿಸಿ ಎಂದು ಸಂದೇಶದಲ್ಲಿತ್ತು. ಜತೆಗೆ, ಜಾಲತಾಣವೊಂದರ ಲಿಂಕ್ ಸಹ ನಮೂದಿಸಲಾಗಿತ್ತು. ನೋಂದಣಿ ಮಾಡಿ ಕೊಳ್ಳು ವಂತೆ ಸೂಚಿಸಲಾಗಿತ್ತು. ಅದನ್ನು ನಂಬಿದ ದೂರುದಾರ, ಲಿಂಕ್ ಕ್ಲಿಕ್ ಮಾಡಿ ಜಾಲತಾಣ ತೆರೆದು, ಹೆಸರು, ವೈಯಕ್ತಿಕ ಮಾಹಿತಿ ಯನ್ನು ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಕೂಡ ಸೃಷ್ಟಿಸಿಕೊಂಡಿದ್ದರು.
ಮತ್ತೂಂದೆಡೆ ದೂರುದಾರ ಖಾತೆ ತೆರೆಯುತ್ತಿದ್ದಂತೆ ಆರೋಪಿಗಳು ಮತ್ತೂಂದು ಸಂದೇಶ ಕಳುಹಿಸಿದ್ದರು. ದುಪ್ಪಟ್ಟು ಲಾಭ ನೀಡುವ ಷೇರುಗಳನ್ನು ಖರೀದಿಸುವಂತೆ ಸಲಹೆ ನೀಡಿದ್ದರು. ಅದನ್ನು ನಂಬಿದ್ದ ದೂರುದಾರ, ಆರಂಭದಲ್ಲಿ ಕೆಲ ಷೇರುಗಳನ್ನು ಖರೀದಿಸಿದ್ದರು. ಕೆಲ ದಿನಗಳ ನಂತರ ಯಾವುದೇ ಲಾಭ ಬಂದಿಲ್ಲ. ಲಾಭದ ಬಗ್ಗೆ ಪ್ರಶ್ನಿಸಿದಾಗ ಮತ್ತಷ್ಟು ಷೇರುಗಳನ್ನು ಖರೀದಿಸುವಂತೆ ಆರೋಪಿಗಳು ಹೇಳಿದ್ದರು. ಅದನ್ನೂ ನಂಬಿ, ಪುನಃ ಷೇರು ಖರೀದಿಸಿದ್ದರು. ಆಗಲೂ ಲಾಭ ಬಂದಿಲ್ಲ. ಒಂದೇ ಬಾರಿಗೆ ಷೇರಿನ ಮೊತ್ತ ಹಾಗೂ ಲಾಭದ ಹಣ ವಾಪಸು ನೀಡುವುದಾಗಿ ಹೇಳಿದ್ದ ವಂಚಕರು, ಮತ್ತೂಮ್ಮೆ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಆ ನಂತರ ದೂರುದಾರಿಂದ ಹಂತ-ಹಂತವಾಗಿ 5.18 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿ ದ್ದಾರೆ. ಕೆಲ ದಿನಗಳ ಬಳಿಕ ಆರೋಪಿಗಳು, ಪುನಃ ಹಣ ಕೇಳಿದಾಗ ಅನುಮಾನಗೊಂಡು ಠಾಣೆಗೆ ಬಂದು ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.