ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಸೋಂಕಿನಿಂದ ಓರ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 49 ಹೊಸ ಕೋವಿಡ್ 19 ಸೊಂಕು ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು 21 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊಳ್ಳೇಗಾಲದ ಭೀಮನಗರ ನಿವಾಸಿ, ಪುರಸಭೆ ಮಾಜಿ ಉಪಾಧ್ಯಕ್ಷ ಡಿ. ಸಿದ್ಧರಾಜು (72) ಮೃತಪಟ್ಟವರು. ಇವರು ಜು.29ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 12 ಮಂದಿ ಮೃತಪಟ್ಟಿದ್ದಾರೆ. ಬುಧವಾರ 49 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 900ಕ್ಕೇರಿದೆ. 568 ಮಂದಿ ಗುಣಮುಖರಾಗಿದ್ದಾರೆ ಈ ಮೂಲಕ ಇದೀಗ ಜಿಲ್ಲೆಯಲ್ಲಿ 318 ಸೋಂಕು ಪ್ರಕರಣಗಳು ಸಕ್ರಿಯವಾಗಿವೆ.
ಬುಧವಾರ ಚಾಮರಾಜನಗರ ತಾಲೂಕಿನಿಂದ 16, ಕೊಳ್ಳೇಗಾಲ ತಾಲೂಕಿನಿಂದ 14, ಗುಂಡ್ಲುಪೇಟೆ ತಾಲೂಕಿನಿಂದ 9, ಹನೂರು ತಾಲೂಕಿನಿಂದ 6 ಹಾಗೂ ಯಳಂದೂರು ತಾಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ.
ಇಂದಿನ ಪ್ರಕರಣಗಳು: 49
ಇಂದು ಗುಣಮುಖಗೊಂಡ ಸೋಂಕಿತರ ಸಂಖ್ಯೆ: 21
ಒಟ್ಟು ಗುಣಮುಖಗೊಂಡವರು: 568
ಸೊಂಕಿನಿಂದ ಇಂದು ಮೃತಪಟ್ಟವರು: 01
ಇದುವರೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ಒಟ್ಟು ಸಾವು: 12
ಕೋವಿಡ್ 19 ಒಟ್ಟು ಸಕ್ರಿಯ ಪ್ರಕರಣ: 318
ಒಟ್ಟು ಸೋಂಕಿತರ ಸಂಖ್ಯೆ: 900