Advertisement

400 ಕೋ.ರೂ. ಲಾಭ ಸಿಕ್ಕರೂ ಕೋಪವೇಕೆ?: ಗೋಯೆಂಕಾಗೆ ವೀರೇಂದ್ರ ಸೆಹವಾಗ್‌ ಪ್ರಶ್ನೆ

12:15 AM May 14, 2024 | Team Udayavani |

ಲಕ್ನೋ: ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಲಕ್ನೋ ಫ್ರಾಂಚೈಸಿ ಮಾಲಕ ಸಂಜೀವ್‌ ಗೋಯೆಂಕಾ ವರ್ತನೆಯನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಖಂಡಿಸಿದ್ದಾರೆ. 400 ಕೋಟಿ ರೂ. ಲಾಭ ದೊರೆತ ಬಳಿಕವೂ ಆಟಗಾರರ ಮೇಲೆ ಕೋಪ ತೋರಿಸುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

ಆಟಗಾರರು ಮತ್ತು ತಂಡದ ಸಿಬಂದಿ ಮೇಲೆ ಮಾಲ ಕರು ಕೋಪಗೊಳ್ಳುವುದನ್ನು ಬಿಡಬೇಕು. ತಂಡವನ್ನು ನಡೆಸಲು ನಾಯಕ ಹಾಗೂ ಕೋಚ್‌ ಇರುತ್ತಾರೆ. ಮಾಲಕರು ತಂಡಕ್ಕೆ ಸ್ಫೂರ್ತಿ ತುಂಬುವ ಮಾತುಗಳನ್ನಷ್ಟೇ ಆಡಬೇಕು ಎಂದು ಸೆಹವಾಗ್‌ ಹೇಳಿದ್ದಾರೆ.

“”ತಂಡಗಳ ಮಾಲಕರು ಕೇವಲ ಉದ್ಯಮಿಗಳಾಗಿರು ತ್ತಾರೆ. ಅವರಿಗೆ ಲಾಭ ಮತ್ತು ನಷ್ಟ ಮಾತ್ರ ಗೊತ್ತಾಗುತ್ತದೆ. ಆದರೆ ಇಲ್ಲಿ ಯಾವುದೇ ನಷ್ಟವಾಗಿಲ್ಲ. ಆದರೂ ಏಕೆ ಇಷ್ಟೊಂದು ತೊಂದರೆಗೊಳಗಾದವರಂತೆ ಮಾತನಾಡುತ್ತಿದ್ದಾರೆ? 400 ಕೋಟಿ ರೂ. ಲಾಭವಾದ ಬಳಿಕವೂ ಆಟಗಾರರ ಮೇಲೆ ಕೋಪ ಏಕೆ? ಉದ್ಯಮಿಗಳಾದ ನಿಮಗೆ ಲಾಭ ಸಿಕ್ಕ ಮೇಲೆ ನೀವು ಆಟಗಾರರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next