Advertisement

40 ಪರ್ಸೆಂಟ್‌ ಪ್ರಕರಣ: ವಿಚಾರಣ ಆಯೋಗ ರಚನೆ

12:50 AM Aug 27, 2023 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ದೂರಿನ ಅನ್ವಯ ಹಿಂದಿನ ಸರಕಾರದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ರಚಿಸಿದ್ದ ತನಿಖಾ ಸಮಿತಿಯನ್ನು ರದ್ದುಪಡಿಸಿರುವ ಸರಕಾರವು ಅವರ ನೇತೃತ್ವದಲ್ಲೇ ವಿಚಾರಣ ಆಯೋಗವನ್ನು ರಚಿಸಿ ಆದೇಶಿಸಿದೆ.

Advertisement

ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಪ್ಯಾಕೇಜ್‌ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್‌ ಪ್ರಕ್ರಿಯೆ ಇತ್ಯಾದಿಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚಿನ ಲಂಚಗುಳಿತನ ನಡೆಯುತ್ತಿರುವುದಾಗಿ ಆರೋಪಿಸಿದ್ದ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಕಾಮಗಾರಿ ಆರಂಭಿಸುವ ಮೊದಲು ಶೇ. 25ರಿಂದ 30ರಷ್ಟು ಲಂಚವನ್ನು ಕೆಲವು ಜನಪ್ರತಿನಿಧಿಗಳಿಗೆ ನೀಡಬೇಕಿದೆ ಹಾಗೂ ಬಾಕಿ ಬಿಲ್‌ಗ‌ಳ ತೀರುವಳಿಗೆ ಶೇ. 5ರಿಂದ 6ರಷ್ಟು ಲಂಚ ಕೇಳಲಾಗುತ್ತಿದೆ ಎಂದು ಆಪಾದಿಸಿದ್ದರು.

ಇದೆಲ್ಲವನ್ನೂ ತನಿಖೆಗೊಳಪಡಿಸಲು ನ್ಯಾ| ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಇದಕ್ಕೆ ಆಯೋಗದ ಮಾನ್ಯತೆ ಬೇಕೆಂಬುದನ್ನು ಮನ ಗಂಡ ಸರಕಾರ ಈಗ ವಿಚಾರಣ ಆಯೋಗ ರಚಿಸಿ ಆದೇಶಿಸಿದ್ದು, ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಸಣ್ಣ ನೀರಾವರಿ ಇಲಾಖೆಗಳನ್ನು ತನಿಖೆಯ ವ್ಯಾಪ್ತಿಗೆ ಸೇರಿಸಿದೆ.

ಟೆಂಡರ್‌ ಪ್ರಕ್ರಿಯೆ, ಪ್ಯಾಕೇಜ್‌ ಪದ್ಧತಿ, ಪುನರ್‌ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರದ ಕುರಿತು ಸ್ಥಳ ಹಾಗೂ ದಾಖಲಾತಿ ಪರಿಶೀಲಿಸಿ, ಲೋಪದೋಷಗಳ ಮಾಹಿತಿ ಮತ್ತು ಆರೋಪಿಗಳ ಸ್ಪಷ್ಟ ಗುರುತಿಸುವಿಕೆ ಮೂಲಕ ಪರಿಪೂರ್ಣ ತನಿಖೆ ನಡೆಸಬೇಕು.

ದೂರುದಾರರು ನೀಡಿರುವ ಎಲ್ಲ ಮನವಿ, ದೂರು ಅರ್ಜಿಗಳಲ್ಲಿರುವ ಅಂಶಗಳನ್ನೂ ತನಿಖೆ ಮಾಡಬೇಕು ಎಂದು ಸೂಚಿಸಲಾಗಿದೆ.

Advertisement

ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರು ವುದು, ಅವುಗಳ ಗುಣಮಟ್ಟ, ಅನುಸೂಚಿ ದರಗಳ ಅನ್ವಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆಯೇ- ಇಲ್ಲವೇ, ಅನುಮೋದನೆ ನೀಡಿದ ಸಕ್ಷಮ ಪ್ರಾಧಿಕಾರಿ, ನಿರ್ವಹಿಸದ ಕಾಮಗಾರಿಗೂ ಬಿಲ್‌ ಪಾವತಿಸಿದೆಯೇ, ಹೆಚ್ಚುವರಿ ಬಿಲ್‌ ಪಾವತಿ ಮಾಡಲಾಗಿದೆಯೇ, ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಟೆಂಡರ್‌ ಪ್ರಕ್ರಿಯೆ ನಡೆದಿದೆಯೇ ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು ಹಾಗೂ ಪರಿಶೀಲನೆ ವೇಳೆ ಕಂಡುಬರುವ ಇನ್ನಾéವುದೇ ಗಂಭೀರ ವಿಷಯಗಳನ್ನು ವಿಚಾರಣ ಆಯೋಗ ಪರಾಮರ್ಶಿಸುವಂತೆ ಕೋರಿದೆ.

ತನಿಖೆ ನಡೆಸಲು ಎಲ್ಲ ರೀತಿಯ ಅಧಿಕಾರವನ್ನು ಆಯೋಗಕ್ಕೆ ನೀಡಿದ್ದು, ವಿಚಾರಣೆಗೆ ಸಹಕರಿಸುವಂತೆ ಎಲ್ಲ ಇಲಾಖೆಗಳಿಗೂ ಸೂಚಿಸಲಾಗಿದೆ. ಸಿಬಂದಿ, ಸಾಮಗ್ರಿ, ವಾಹನ, ಕಚೇರಿ ಇತ್ಯಾದಿ ಅಗತ್ಯ ಸಲಕರಣೆಗಳನ್ನು ಒದಗಿಸಿ, ನಿಯಮಾನುಸಾರ ಭತ್ತೆ ಸೌಲಭ್ಯ ಕಲ್ಪಿಸುವಂತೆಯೂ ಆದೇಶಿಸಿದೆ. ಮೂರು ತಿಂಗಳುಗಳಲ್ಲಿ ವರದಿ ಸಲ್ಲಿಸುವಂತೆಯೂ ಅಪೇಕ್ಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next