Advertisement

40 ಕೋಟಿ ಕೊಟ್ಟರೆ ಇಡೋಕೆ ಜಾಗ ಇಲ್ಲ: ನಾರಾಯಣರಾವ್‌

10:19 AM Jul 20, 2019 | Lakshmi GovindaRaj |

ಬೆಂಗಳೂರು: ಮುಂಬೈಗೆ ಹೋಗಿರುವ ಶಾಸಕರಿಗೆ 40 ಕೋಟಿ ಕೊಟ್ಟಿದ್ದಾರೆ. ನೀವು ಸರ್ಟಿಫಿಕೇಟ್‌ ಇಟ್ಕೊಂಡು ಏನ್‌ ಮಾಡ್ತಿರಾ ಎಂದು ಜನ ಕೇಳುತ್ತಿದ್ದಾರೆ. 40 ಕೋಟಿ ಹಣ ತೆಗೆದುಕೊಂಡು ಏನು ಮಾಡಬೇಕೆನ್ನುವುದೇ ನನಗೆ ಗೊತ್ತಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ವಿಧಾನಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.

Advertisement

ಮುಖ್ಯಮಂತ್ರಿ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ ಮಾತನಾಡಿದ ಅವರು, 40 ಕೋಟಿ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅಥವಾ ಯಡಿಯೂರಪ್ಪ ನೀಡಿದರೆ ಅದನ್ನು ಇಡಲು ನನಗೆ ಜಾಗ ಇಲ್ಲ. ನಾನು ಹಣ ತೆಗೆದುಕೊಂಡರೆ ಲೋಕಾಯುಕ್ತರು ಬರುತ್ತಾರೆ. ಅವರಿಗೆ ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ಅದು ಅಮಿತ್‌ ಶಾವರೆಗೆ ಹೋಗುತ್ತದೆ. ನನಗೇಕೆ ಬೇಕು ಈ ಉಸಾಬರಿ, ನನ್ನ ಮತದಾರರೇ ನನಗೆ ಸಾಮ್ರಾಟರು. ಅವರಿಗೆ ನಾನು ಉತ್ತರ ಕೊಡಬೇಕು ಎಂದು ಸದನದಲ್ಲಿ ತಮ್ಮ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next