Advertisement

ಬಲ್ಯ ಪಟ್ನೂರಿನಲ್ಲಿ ಅಪಘಾತ: ನಾಲ್ವರಿಗೆ ಗಂಭೀರ ಗಾಯ

01:39 AM Apr 23, 2019 | sudhir |

ಕಡಬ: ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಪಟ್ನೂರಿನಲ್ಲಿ ಸೋಮವಾರ ಅಪರಾಹ್ನ ಬೈಕ್‌ ಮತ್ತು ಮಾರುತಿ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಹಾಗೂ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬೈಕ್‌ ಸವಾರ ಬಲ್ಯ ಗ್ರಾಮದ ಕಕ್ಕೆಮಜಲು ರಾಮಣ್ಣ ಗೌಡರ ಪುತ್ರ ಶಿವಪ್ರಸಾದ್‌ (24), ಕಾರಿನಲ್ಲಿದ್ದ ಕಡಬ ಹಳೆಸ್ಟೇಷನ್‌ ನಿವಾಸಿಗಳಾದ ಅಬ್ರಹಾಂ (52), ಶಾಲಿ (50) ಹಾಗೂ ಸಿಂಧೂ (40) ಎಂದು ಗಾಯಗೊಂಡವರು.

ಪೈಂಟಿಂಗ್‌ ವೃತ್ತಿಯ ಶಿವಪ್ರಸಾದ್‌ ಕಡಬದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.

ಶಿವಪ್ರಸಾದ್‌ ಪುತ್ತೂರಿನ ಹಾಗೂ ಕಾರು ಪ್ರಯಾಣಿಕರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next