Advertisement

ಕೆರೆಯಲ್ಲಿ ಮುಳುಗಿ ನಾಲ್ವರ ಸಾವು, ಐವರು ಪಾರು

01:39 PM Dec 19, 2017 | |

ಬಸವಕಲ್ಯಾಣ: ಎಳ್ಳ ಅಮಾವಾಸ್ಯೆ ನಿಮಿತ್ತ ವನ ಭೋಜನಕ್ಕೆಂದು ಹೊಲಕ್ಕೆ ಹೋಗಿದ್ದಒಬ್ಬ ಬಾಲಕ, ಮೂವರು ಬಾಲಕಿಯರು ಸೇರಿ ನಾಲ್ವರು ನೀರುಪಾಲಾದ ದಾರುಣ ಘಟನೆ ಕೋಹಿನೂರ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. 

Advertisement

ಕೋಹಿನೂರ ಪಹಾಡದ ಬಾಲಕಿಯರಾದ ತನಾಜಬಾನು ಲಾಲ್‌ ಮಹ್ಮದ(18),ಇಸ್ರಾತ ಇಸ್ಮಾಯಿಲ್‌ಖುರೇಶಿ (15), ಜಿಯಾಬಾನು ಅಬ್ದುಲ್‌ ಸತ್ತಾರ (17) ಹಾಗೂ ಒರ್ವ ಬಾಲಕ ತಬ್ರೇಜ್‌ ನಾಜೀರಸಾಬ್‌(10) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. 

 ಕೆರೆಯಲ್ಲಿ ಮೀನುಗಳಿಗೆ ಆಹಾರ ಹಾಕಲು ಬಳಸುವ ಪೈಡಲ್‌ ಬೋಟು (ತೆಪ್ಪ) ಇರುವುದನ್ನು ಗಮನಿಸಿ  ಒಂಭತ್ತು ಜನ ಬೋಟು ಹತ್ತಿ ವಿಹಾರಕ್ಕೆಂದು ನೀರಿಗಿಳಿದಿದ್ದರು. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಕುಳಿತಿದ್ದರಿಂದ ಈ ಬೋಟು ನಿಯಂತ್ರಣ ಕಳೆದುಕೊಂಡ ಪಲ್ಪಿಯಾಗಿ  ದುರಂತ ನಡೆದಿದೆ. ಐವರು ಈಜಿ ದಡ ಸೇರಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. 

ಎನ್‌ಡಿಆರ್‌ಎಫ್ ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ನಾಲ್ವರ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಮೃತ ಬಾಲಕ, ಬಾಲಕಿಯರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next