Advertisement

Uttarakhand ಭೂಕುಸಿತಕ್ಕೆ 4 ಮೃತ್ಯು, ಹಿಮಾಚಲದಲ್ಲಿ ಭಾರೀ ಮಳೆ ನಿರೀಕ್ಷೆ, ಶಾಲೆಗಳಿಗೆ ರಜೆ

08:06 AM Aug 22, 2023 | Team Udayavani |

ಶಿಮ್ಲಾ: ಆಗಸ್ಟ್ 22 ರಿಂದ 24 ವರೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಅಲ್ಲದೆ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಿದೆ.

Advertisement

ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದು ಅಲ್ಲಿನ ಜನ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚಿಸಿದೆ.

ಭಾರೀ ಮಳೆಯಿಂದಾಗಿ ಭೂಕುಸಿತ, ಹಠಾತ್ ಪ್ರವಾಹ ಮತ್ತು ನದಿಗಳು ಮತ್ತು ಚರಂಡಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಬಹುದು, ಜೊತೆಗೆ ಬೆಳೆದು ನಿಂತ ಬೆಳೆಗಳು, ಹಣ್ಣಿನ ಗಿಡಗಳು ಹಾನಿಗೊಳಗಾಗಬಹುದೆಂದು ಸೂಚನೆ ನೀಡಿದೆ.

ಉತ್ತರಾಖಂಡ ಭೂಕುಸಿತದಲ್ಲಿ 4 ಸಾವು, ರಸ್ತೆ ತಡೆ:
ಸೋಮವಾರ ಉತ್ತರಾಖಂಡದ ತೆಹ್ರಿ ಜಿಲ್ಲೆಯ ಚಂಬಾದಲ್ಲಿ ಭೂಕುಸಿತದಿಂದ ಇಬ್ಬರು ಮಹಿಳೆಯರು ಮತ್ತು 4 ತಿಂಗಳ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಮತ್ತೋರ್ವ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನವನೀತ್ ಸಿಂಗ್ ಬುಲ್ಲರೈಡ್ ತಿಳಿಸಿದ್ದಾರೆ.

ಚಂಬಾ ಪೊಲೀಸ್ ಠಾಣೆ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್‌ ಬಳಿ ಭೂಕುಸಿತ ಸಂಭವಿಸಿದ್ದರಿಂದ ಇನ್ನೂ ಕೆಲವು ವಾಹನಗಳು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭೂ ಕುಸಿತ ಪ್ರದೇಶದಲ್ಲಿ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.

Advertisement

ಶಾಲೆಗಳಿಗೆ ರಜೆ:
ಮುಂದಿನ ಎರಡು ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯ ಹಿನ್ನೆಲೆಯಲ್ಲಿ 1 ರಿಂದ 12 ನೇ ತರಗತಿ ವರೆಗಿನ ಎಲ್ಲಾ ಶಾಲೆಗಳು ಮತ್ತು ತೆಹ್ರಿ ಜಿಲ್ಲೆಯ ಭಿಲಂಗಾನ, ಚಂಬಾ, ನರೇಂದ್ರ ನಗರ ಮತ್ತು ಜೌನ್‌ಪುರದ ಅಂಗನವಾಡಿ ಕೇಂದ್ರಗಳನ್ನು ಮಂಗಳವಾರ ಮುಚ್ಚಲಾಗಿದೆ.

ಹವಾಮಾನ ಇಲಾಖೆಯು ಮಂಗಳವಾರ ಡೆಹ್ರಾಡೂನ್, ಪೌರಿ, ನೈನಿತಾಲ್, ಚಂಪಾವತ್ ಮತ್ತು ಬಾಗೇಶ್ವರ್ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next