Advertisement

ಕೊಲೆಗೆ ಯತ್ನ: ಅಳಕೆ ಗ್ಯಾಂಗ್ ನ ನಾಲ್ವರನ್ನು ಬಂಧಿಸಿದ ಮಂಗಳೂರು ಪೊಲೀಸರು

03:53 PM Dec 04, 2021 | Team Udayavani |

ಮಂಗಳೂರು : ಅಳಕೆ ಮತ್ತು ಬೋಳೂರು ಗ್ಯಾಂಗ್ ಗಳ ನಡುವಿನ ದ್ವೇಷ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲವಾರು ದಾಳಿ ನಡೆಸಿದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 28 ರ ನಸುಕಿನ 2 ಗಂಟೆಯ ವೇಳೆಗೆ  ಅಂಕಿತ್ ಮತ್ತು ಶ್ರವಣ್ ಎನ್ನುವವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ ಆರೋಪಿಗಳಾದ ಅಳಕೆ ಗ್ಯಾಂಗಿನ ಹತ್ಯೆಗೀಡಾದ ಇಂದ್ರಜಿತ್ ಸ್ನೇಹಿತರಾದ ನವನೀತ್ ಅಶೋಕನಗರ , ಹೇಮಂತ್ ಹೊಯಿಗೆ ಬೈಲ್ , ದೀಕ್ಷಿತ್ ಬೋಳೂರು, ಮತ್ತು ಆರೋಪಿಗಳು ತಲೆ ಮರೆಸಿಕೊಳ್ಳಲು ನೆರವಾದ ಸಂದೇಶ್ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಇತರರ ಬಂಧನ ಬಾಕಿ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಬಳಸಿದ 3 ತಲವಾರುಗಳು, 3 ದ್ವಿಚಕ್ರ ವಾಹನಗಳನ್ನು ಮತ್ತು ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಈ ಹಿಂದೆಯೂ ಅಪರಾಯಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಹೇಮಂತ್ ಮೂರು ಪ್ರಕರಣಗಳಲ್ಲಿ, ನವನೀತ್ 2 ಪ್ರಕರಣಗಳಲ್ಲಿ ಮತ್ತು ದೀಕ್ಷಿತ್ 1 ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದರು.

2020 ರಲ್ಲಿ ಇಂದ್ರಜಿತ್ ನನ್ನ ಬೋಳೂರು ಗ್ಯಾಂಗ್ ಹತ್ಯೆ ಮಾಡಿತ್ತು.

Advertisement

2014 ರಲ್ಲಿ ಬೋಳೂರು ಗ್ಯಾಂಗ್ ನ ತಲ್ವಾರ್ ಜಗ್ಗ ಸೇರಿ ಮೂವರ ಹತ್ಯೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next