Advertisement

ಕೆರೆ ಅಭಿವೃದ್ಧಿಗೆ 4.10 ಕೋಟಿ ಬಿಡುಗಡೆ

03:29 PM Oct 23, 2022 | Team Udayavani |

ಗೌರಿಬಿದನೂರು: ಮೇಳ್ಯ ಕೆರೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಕೆರೆ ಅಭಿವೃದ್ಧಿಪಡಿಸಲು ಒತ್ತಾಯಿಸಿ ನಗರದ ಹೊರವಲಯದ ತಾಲೂಕು ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಯಿತು.

Advertisement

ಇದೇ ವೇಳೆಯಲ್ಲಿ ಪ್ರತಿಭಟನೆ ನೇತೃತ್ವವನ್ನು ವಹಿಸಿ ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್‌.ಆರ್‌. ರವಿಚಂದ್ರರೆಡ್ಡಿ ಅವರು 2 ವರ್ಷಗಳಿಂದ ಭಾರಿ ಮಳೆಯಿಂದ ಮೇಳ್ಯ ಕೆರೆಯ ಒಳ ಹರಿವು ಹೆಚ್ಚಿಸಿ ಕೆರೆ ಕಟ್ಟೆ ಶಿಥಿಲಗೊಂಡು 2 ಬಾರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಆಗಿದೆ. ಇದನ್ನು ತಡೆಯಲು ಅಧುನಿಕ ರೀತಿಯಲ್ಲಿ ಕೆರೆ ನಿರ್ವಹಣೆ ಹಾಗೂ ಕಾಲ ಕಾಲಕ್ಕೂ ಸರಿಯಾಗಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು, ಮಳೆಯಿಂದ ಜಗರೆಡ್ಡಿಹಳ್ಳಿ ಯಿಂದ ಹುಣೇಸನಹಳ್ಳಿವರಿಗೂ ರಸ್ತೆ ಹಾಳಾಗಿದೆ ಇದನ್ನು ತ್ವರಿತವಾಗಿ ಸರಿಪಡಿಸಬೇಕು. ಜತೆಗೆ ಕೆರೆಯ ಕಾಲುವೆಗಳ ದುರಸ್ತಿ ಮಾಡಬೇಕು ದಿನ್ನೆ ಹೊಸಹಳ್ಳಿ ಮತ್ತು ಚಿಟ್ಟಾವಾಳಹಳ್ಳಿ ಗ್ರಾಮಗಳಿಗೆ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.

ಸ್ಥಳಕ್ಕೆ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಆಗಮಿಸಿ ಹೋರಾಟಗಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಮೇಳ್ಯ ಕೆರೆ ಅಭಿವೃದ್ಧಿಗೆ 4.10 ಕೋಟಿ ಮತ್ತು ಜಗರೆಡ್ಡಿಹಳ್ಳಿಯಿಂದ ಹುಣಿಸನಹಳ್ಳಿ ರಸ್ತೆ ಅಭಿವೃದ್ಧಿಗೆ 3.40 ಕೋಟಿ ರೂ. ನೀಡಲು ಸರ್ಕಾರ ಅನುಮತಿ ನೀಡಿದೆ. 2 ತಿಂಗಳಲ್ಲಿ ಈ ಎಲ್ಲ ಬೇಡಿಕೆಗಳು ಈಡೇರಿಸುವುದಾಗಿ ತಿಳಿಸಿದರು.

ತಹಶೀಲ್ದಾರ್‌ ಎಚ್‌.ಶ್ರೀನಿವಾಸ್‌,ಇ.ಒ.ಹರೀಶ್‌, ಸಣ್ಣ ನೀರಾವರಿ ಅಧಿಕಾರಿಗಳು ರೈತ ಮುಖಂಡ ರಾಮಚಂದ್ರರೆಡ್ಡಿ ಮೇಳ್ಯ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next