Advertisement

Theft Case ಗುಜರಿ ಅಂಗಡಿಯಿಂದ 3 ನೇ ಬಾರಿ ಕಳವು : ಇಬ್ಬರ ಬಂಧನ

08:19 PM May 15, 2024 | Team Udayavani |

ಉಪ್ಪಳ: ಎರಡು ಬಾರಿ ವಿವಿಧ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಕಳ್ಳರು ಮೂರನೇ ಬಾರಿ ಕಳವಿಗೆ ಯತ್ನಿಸಿದಾಗ ಸ್ಥಳೀಯರ ಕೈಯಲ್ಲಿ ಸಿಲುಕಿದ ಘಟನೆ ನಡೆದಿದೆ. ಬಳಿಕ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.

Advertisement

ಪೊಲೀಸರು ಆ ಬಳಿಕ ಬಂಧಿಸಿದರು. ಕರ್ನಾಟಕ ಹಾಸನ ಬೇಳೂರು ಅಂಗಡಿ ಹಳ್ಳಿಯ ಬಬ್ರುವಾಹನ ಯಾನೆ ಅಶೋಕ್‌(23) ಮತ್ತು ತಮಿಳುನಾಡಿನ ಶಿರಿಮಂಗಲಂ ಮಾವಾಟ್ಟಂ ಕಲ್ಲಗುಮುಚ್ಚಿಯ ಹರಿಶ್ಚಂದ್ರ (35)ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಸೋಟುನಲ್ಲಿರುವ ಬಡಾಜೆಯ ಕರೀಂ ಅವರ ಮಾಲಕತ್ವದ ಗುಜರಿ ಅಂಗಡಿಯಿಂದ ಶನಿವಾರ ರಾತ್ರಿ ಕಳವು ನಡೆದಿದೆ. ಒಂದು ಕಿಲೋ ಹಿತ್ತಾಳೆ ಸಾಮಗ್ರಿಗಳು, ಎರಡು ಸಿಸಿ ಟಿವಿ ಕ್ಯಾಮರಾಗಳನ್ನು ಕಳವು ಮಾಡಿದ್ದಾರೆ.

ಕಳವುಗೈದ ಸಾಮಗ್ರಿಗಳೊಂದಿಗೆ ರಾತ್ರ 12 ಗಂಟೆಗೆ ಮಂಜೇಶ್ವರ ರೈಲು ನಿಲ್ದಾಣಕ್ಕೆ ತಲುಪಿದ ಈ ಇಬ್ಬರನ್ನು ಕಂಡ ಸ್ಥಳೀಯರು ಸಂಶಯದಿಂದ ಅವರ ಕೈಯಲ್ಲಿದ್ದ ಬ್ಯಾಗ್‌ ತೆಗೆದು ನೋಡಿದಾಗ ಹಿತ್ತಾಳೆ ಸಾಮಗ್ರಿಗಳು ಹಾಗು ಸಿಸಿ ಟಿವಿ ಕ್ಯಾಮರಾಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಹಿಡಿದು ಮಂಜೇಶ್ವರ ಪೊಲೀಸರಿಗೊಪ್ಪಿಸಿದರು. ಇದೇ ಅಂಗಡಿಯಿಂದ ಈ ಹಿಂದೆ ಎರಡು ಬಾರಿ ಕಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next