Advertisement

370ನೇ ವಿಧಿ ರದ್ದತಿ: ಬಂಟ್ವಾಳದ ವ್ಯಕ್ತಿಗೆ ಪ್ರಧಾನಿ ಮೋದಿ ಪ್ರಶಂಸಾ ಪತ್ರ

12:18 AM Sep 25, 2019 | mahesh |

ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸುವಂತೆ ಬಂಟ್ವಾಳದ ವ್ಯಕ್ತಿಯೊಬ್ಬರು ಅನೇಕ ವರ್ಷಗಳಿಂದ ಹಲವು ಬಾರಿ ಪ್ರಧಾನಿ ಮೋದಿ ಅವರನ್ನು ಪತ್ರದ ಮೂಲಕ ಆಗ್ರಹಿಸಿದ್ದು, ಈಗ ವಿಧಿ ರದ್ದಾದ ಬಳಿಕ ಪ್ರಧಾನಿ ಕಚೇರಿಯಿಂದ ಅವರಿಗೆ ಪ್ರಶಂಸಾ ಪತ್ರವೊಂದು ಬಂದಿದೆ.

Advertisement

ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಲಕ್ಷ್ಮೀನಾರಾಯಣ್‌ ಅವರು ಈ ವಿಚಾರವಾಗಿ ಹಲವು ಬಾರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಆ. 21ರ ದಿನಾಂಕವಿರುವ ಪ್ರಶಂಸಾ ಪತ್ರ ಲಕ್ಷ್ಮೀನಾರಾಯಣ್‌ ಅವರ ಕೈಸೇರಿದೆ.

ಪತ್ರದ ಮೇಲ್ಗಡೆ ಅಶೋಕ ಚಕ್ರ ಲಾಂಛನ ಇದ್ದು, ವಿಶೇಷ ಸ್ಥಾನಮಾನ ರದ್ದತಿಯ ಕುರಿತು ಆಂಗ್ಲ ಭಾಷೆಯಲ್ಲಿ ವಿವರಿಸಲಾಗಿದೆ. ಮಂಗಳವಾರ ಬಿ.ಸಿ.ರೋಡ್‌ನ‌ಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಲಕ್ಷ್ಮೀನಾರಾಯಣ್‌ ಅವರನ್ನು ಗೌರವಿಸಿದರು.

ಸಮಾರಂಭದಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಬಿಜೆಪಿ ಪ್ರಮುಖರಾದ ಬಿ. ದೇವದಾಸ ಶೆಟ್ಟಿ, ಸತೀಶ್‌ ಕುಂಪಲ, ಪೂಜಾ ಪೈ, ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next