Advertisement
ಶ್ರೀನಗರದಲ್ಲಿ ಸೋಮವಾರ ಸುದ್ದಿ, ಗೋಷ್ಠಿ ನಡೆಸಿದ ಅವರು, “”ಕೇಂದ್ರ ಸರಕಾರ ಬೆಂಕಿಯೊಡನೆ ಸರಸ ಆಡು ವುದನ್ನು ಬಿಡಬೇಕು. 35-ಎ ಪರಿಚ್ಛೇದ ತೆಗೆದುಹಾಕಲು ಪ್ರಯತ್ನಪಟ್ಟರೆ 1947 ರಿಂದ ಈವರೆಗೆ ಘಟಿಸದಂಥ ಘಟನೆಗಳು ನಡೆದುಹೋಗುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ. ಇದೇ ವಾರದಲ್ಲಿ 35-ಎ ಪರಿಚ್ಛೇದದ ಔಚಿತ್ಯದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭ ವಾಗಲಿದ್ದು, ಅದಕ್ಕೂ ಮುನ್ನವೇ ಮುಫ್ತಿಯವರ ಈ ಹೇಳಿಕೆ ರಾಜಕೀ ಯವಾಗಿ ಮಹತ್ವ ಪಡೆದಿದೆ. “35 -ಎ’ ಪರಿಚ್ಛೇದವು, ಕಾಶ್ಮೀರ ರಾಜ್ಯ ಸರಕಾರಕ್ಕೆ ತನ್ನಲ್ಲಿನ ನಿವಾಸಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವುದು, ಅವರಿಗೆ ವಿಶೇಷ ಹಕ್ಕು- ಸವಲತ್ತುಗಳನ್ನು ಕಲ್ಪಿಸುವ ಅಧಿಕಾರ ನೀಡುತ್ತದೆ. ಇದರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿವೆ.
ಒಮರ್ ಅಬ್ದುಲ್ಲಾ, ಮಾಜಿ ಸಿಎಂ