Advertisement

ರಾಜ್ಯದಲ್ಲಿ 319 ಪ್ರವಾಸಿ ಸ್ಥಳ ಗುರುತು

11:05 PM Nov 16, 2019 | Team Udayavani |

ಬೀದರ: ಖಾಸಗಿ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ ನಡೆಸ ಲಾಗುತ್ತಿದ್ದು, ಖಾಸಗಿ ಹೂಡಿಕೆ ದಾರರಿಗೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರವಾಸೋದ್ಯಮ ಬೆಳವಣಿಗೆ ಯಿಂದ ಉದ್ಯೋಗಾ ವಕಾಶಗಳು ಹೆಚ್ಚುತ್ತವೆ. ಪ್ರವಾ ಸೋದ್ಯಮದಿಂದಲೇ ಇಂದು ಹಲವು ರಾಷ್ಟ್ರಗಳು ಆರ್ಥಿಕವಾಗಿ ಸುಧಾರಣೆ ಹೊಂದಿವೆ. ಆದರೆ, ನಮ್ಮಲ್ಲಿ ಎಲ್ಲವೂ ಇದ್ದರೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿಲ್ಲ. ಈ ವಿಷಯದಲ್ಲಿ ಹೆಚ್ಚು ಗಮನ ಹರಿಸಲಾಗುವುದು ಎಂದರು.

ರಾಜ್ಯದಲ್ಲಿ 319 ಪ್ರದೇಶಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಗುರುತಿಸಲಾಗಿದೆ. ಹಿಮ ಬೀಳುವ ಪ್ರದೇಶ ಹೊರತುಪಡಿಸಿ ಎಲ್ಲವೂ ನಮ್ಮಲ್ಲಿ ಲಭ್ಯವಿದೆ. 3 ವಿಶ್ವ ಪಾರಂಪರಿಕ ತಾಣಗಳು, 1,452 ರಾಜ್ಯ ಮತ್ತು ಕೇಂದ್ರ ಪುರಾತತ್ವ ಅಧಿ ನಕ್ಕೆ ಒಳಪಟ್ಟಿರುವ ಸ್ಥಳಗಳಿವೆ ಎಂದು ಹೇಳಿದರು.

ಪದ್ಧತಿ ಇಲ್ಲ: ಪ್ರವಾಸಿ ತಾಣಗಳಲ್ಲಿ ಗೈಡ್‌ಗಳನ್ನು ಸರ್ಕಾರದಿಂದ ನೇಮಕ ಮಾಡಿ ಗೌರವ ಧನ ಕೊಡುವ ಪದ್ಧತಿ ಇಲ್ಲ. ಗೈಡ್‌ಗಳಾಗಿ ಸೇವೆ ಸಲ್ಲಿಸಲು ಯಾರೇ ಅರ್ಜಿ ಸಲ್ಲಿಸಿದರೂ ಅವರಿಗೆ ಪರವಾನಗಿ ಮತ್ತು ಬ್ಯಾಡ್ಜ್ಗಳನ್ನು ವಿತರಿಸಲಾಗುವುದು. ಪ್ರವಾಸಿಗರು ನೀಡುವ ಹಣದಲ್ಲೇ ಗೈಡ್‌ಗಳು ತಮ್ಮ ಕಾರ್ಯ ಮತ್ತು ಜೀವನ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಗ್ರಾಮಗಳ ಮಾಹಿತಿ ತಂತ್ರಜ್ಞಾನ ಮೂಲಕ ಸಿಗಬೇಕೇಂಬ ಉದ್ದೇಶದಿಂದ ವಿಕಿಪೀಡಿಯಾ ಮಾದರಿ ಯಲ್ಲಿ ಪ್ರತಿ ಗ್ರಾಮದ ಮಾಹಿತಿ ಸಂಗ್ರಹಿಸಿ ವೆಬ್‌ಸೈಟ್‌ ಮೂಲಕ ಒದಗಿಸುವ ವ್ಯವಸ್ಥೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಯೋಜನೆ ರೂಪಿಸಲಾ ಗುತ್ತಿದೆ ಎಂದು ಅವರು ತಿಳಿಸಿದರು.

Advertisement

ಗಡಿ ನಾಡು ಬೀದರನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಿದರೆ ಹಿಂದುಳಿದ ಪಟ್ಟ ಅಳಿಸಬಹುದು. ಪ್ರವಾಸಿ ಸ್ಥಳ ಗುರುತಿಸುವುದು, ಸಂಪರ್ಕ-ಮೂಲ ಸೌಕರ್ಯ ಒದಗಿಸಿ ಚಟುವಟಿಕೆ ಆರಂಭಿಸಿದರೆ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ ಎಂದರು.

ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ವ್ಯಾಪ್ತಿಗೆ ವಾಣಿಜ್ಯ ಬೆಳೆ ಕಬ್ಬನ್ನು ಸಹ ಸೇರಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಕಬ್ಬು ಬೆಳೆಗಾರರ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಬ್ಬು ಕೃಷಿಂಗ್‌ನಿಂದ ಮಾತ್ರ ಸಕ್ಕರೆ ಕಾರ್ಖಾನೆಗಳನ್ನು ನಡೆಸುವುದು ಅಸಾಧ್ಯ. ಕಾಲಕ್ಕೆ ತಕ್ಕಂತೆ ಬದಲಾಗಿ, ತಂತ್ರಜ್ಞಾನ ಬಳಸಿಕೊಂಡು ಉಪ ಉತ್ಪನ್ನಗಳತ್ತ ಚಿತ್ತ ಹರಿಸಬೇಕು.
-ಸಿ.ಟಿ ರವಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next