Advertisement

ಚುನಾವಣ ಕಣದಲ್ಲಿ 3,130 ಅಭ್ಯರ್ಥಿಗಳು

11:31 PM Apr 22, 2023 | Team Udayavani |

ಬೆಂಗಳೂರು: ನಾಮಪತ್ರಗಳ ಪರಿಶೀಲನೆ ಮುಕ್ತಾಯಗೊಂಡಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ 3,130 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ನಾಮಪತ್ರ ಹಿಂದೆಗೆದುಕೊಳ್ಳಲು ಎ. 24 ಅಂತಿಮ ದಿನವಾಗಿದ್ದು, ಆ ಬಳಿಕ ಚುನಾವಣ ಅಖಾಡದ ಸ್ಪಷ್ಟ ಚಿತ್ರಣ ಸಿಗಲಿದೆ.
ಬಿಜೆಪಿಯು 224 ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದಂತೆ ಕಾಂಗ್ರೆಸ್‌ 223, ಆಪ್‌ 212, ಜೆಡಿಎಸ್‌ 211, ಬಿಎಸ್‌ಪಿ 137, ಎನ್‌ಪಿಪಿ, ಸಿಪಿಎಂ ತಲಾ ನಾಲ್ಕು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 1,379 ಅಭ್ಯರ್ಥಿಗಳು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಒಟ್ಟು 5,102 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next