Advertisement

3,000 ಕಿ.ಮೀ.ಸೈಕಲ್‌ ಯಾತ್ರೆ ಕೈಗೊಂಡ 73 ವರ್ಷದ ಪದ್ಮಶ್ರೀ ಪುರಸ್ಕೃತ ಡಾ.ಕಿರಣ್‌ ಸೇಥ್‌

09:49 AM Jan 03, 2023 | Team Udayavani |

ಬೆಂಗಳೂರು: ದೇಶದ ಅಭಿವೃದ್ಧಿ ಮತ್ತು ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 73 ವರ್ಷದ ಪದ್ಮಶ್ರೀ ಪುರಸ್ಕೃತ ಡಾ.ಕಿರಣ್‌ ಸೇಥ್‌ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್‌ನಲ್ಲಿ ಯಾತ್ರೆ ಕೈಗೊಂಡಿದ್ದಾರೆ.

Advertisement

ಆ.15ರಂದು ಶ್ರೀನಗರದಿಂದ ಸೈಕಲ್‌ ಯಾತ್ರೆ ಪ್ರಾರಂಭಿಸಿರುವ ಅವರು ಈಗಾಗಲೇ 3,000 ಕಿ.ಮೀ. ಸಂಚರಿಸಿ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಜ.5 ರವರೆಗೆ ನಗರದಲ್ಲಿ ಇರಲಿದ್ದು, ಜನತೆಗೆ ತಮ್ಮ ಸಂದೇಶವನ್ನು ಸಾರಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸಂಗೀತ, ಕಲೆ, ಜಾನಪದ, ನಾಟಕಗಳು ಸೇರಿದಂತೆ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು, ಅದರ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್‌ ಪ್ರಯಾಣ ಬೆಳೆಸಿದ್ದು, ಆ ಮಾರ್ಗದಲ್ಲಿ ಬರುವ ಶಾಲಾ-ಕಾಲೇಜಿನ ವಿದ್ಯಾರ್ಥಿ, ಸಿಬ್ಬಂದಿ, ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಮಂತ್ರಿಗಳು ಸೇರಿದಂತೆ ದಾನಿಗಳನ್ನು ಭೇಟಿ ಮಾಡಿ, ದೇಶದ ಸಂಸ್ಕೃತಿ, ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next