Advertisement

ಪ್ರತಿ ದಿನ 300 ರಿಂದ 400 ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗುವುದು: ಪ್ರಭು ಚೌಹಾಣ್

01:44 PM Jul 11, 2022 | Team Udayavani |

ಬೆಂಗಳೂರು: ನಾಯಿ ಹಾವಳಿ ಬಗ್ಗೆ ಬೆಂಗಳೂರು ನಗರದಲ್ಲಿ ಸಾಕಷ್ಟು ದೂರು ಬರುತ್ತಿದ್ದು, ಪ್ರತಿ ದಿನ 300 ರಿಂದ 400 ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಿ ಹಾವಳಿ ಕುರಿತು ಸಾಕಷ್ಟು ದೂರು ಬರುತ್ತಿವೆ. ಈ ಬಗ್ಗೆ ಸಭೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರ ಜೊತೆ ಸಭೆ ಮಾಡುತ್ತೇನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಮೂರು ಲಕ್ಷ ನಾಯಿಗಳಿವೆ. ದಿನಕ್ಕೆ 240 ನಾಯಿಗಳಿಗೆ ವ್ಯಾಕ್ಸಿನ್ ಆಗುತ್ತಿದೆ. ನಿತ್ಯ 300-400 ನಾಯಿಗಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಎನ್ ಜಿಒ ಗಳೂ ಕೂಡ ಬೀದಿ ನಾಯಿಗಳ ಹಾವಳಿ ತಡೆಗೆ ಸಹಕಾರ ನೀಡುತ್ತಿದ್ದಾರೆ. ನಾಯಿ ಕಡಿತದಿಂದ ಸಾವಾದರೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಾಣಿ ಹಿಂಸೆಗೆ ಸಂಬಂಧಪಟ್ಟಂತೆ ಕಲಬುರ್ಗಿಯಲ್ಲಿ 25 ಕೇಸ್ ಗಳು ದಾಖಲಾಗಿವೆ. ಕೋಲಾರದಲ್ಲಿ ಆರು ಹಸುಗಳ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರೀ ಕಡಿಮೆಯಾಗಿದೆ. ಎರಡು ಲಾರಿಗಳು ಮಹಾರಾಷ್ಟ್ರ ಹೋಗುತ್ತಿದ್ದವು. ಯಲ್ಲಾಪರದಲ್ಲಿ ಆರು ಒಂಟೆ ರಕ್ಷಣೆ ಮಾಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next