Advertisement

ಬುರುಡೆ ಫಾಲ್ಸ್‌ನಲ್ಲಿ ಮೂವರು ಯುವಕರು ನೀರುಪಾಲು 

12:07 PM Mar 09, 2019 | |

ಸಿದ್ದಾಪುರ (ಉತ್ತರ ಕನ್ನಡ ): ತಾಲೂಕಿನ ಬುರುಡೆ ಫಾಲ್ಸ್‌ಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ದುರ್ಘ‌ಟನೆ ಶನಿವಾರ ನಡೆದಿದೆ. 

Advertisement

ನೀರುಪಾಲಾದ ಯುವಕರು ಶಿರಸಿ ಮೂಲದ ಮುರಳಿ (24), ಸಿದ್ಧಾಪುರದ ಅಭಿಷೇಕ್‌ ನಾಯ್ಕ ಮತ್ತು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿ ಎಂದು ಗುರುತಿಸಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು  ಮೇಲಕ್ಕೆತ್ತಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next