Advertisement

ಕುಪ್ವಾರದಲ್ಲಿ ಗುಂಡಿನ ದಾಳಿ :ಇಬ್ಬರು ಯೋಧರು, ಓರ್ವ BSF ಸಿಬ್ಬಂದಿ ಹುತಾತ್ಮ! ಉಗ್ರನ ಹತ್ಯೆ 

04:02 PM Nov 08, 2020 | sudhir |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಸೇನೆಯ ಇಬ್ಬರು ಯೋಧರು, ಬಿಎಸ್‌ಎಫ್ ನ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕೇರನ್‌ ವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Advertisement

ಇದಕ್ಕಿಂತಲೂ ಮೊದಲು ಭಾನುವಾರ ಮಚಿಲ್‌ ಸೆಕ್ಟರ್‌ನಲ್ಲಿ ಎಲ್‌ಒಸಿ ಮೂಲಕ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಉಗ್ರನನ್ನು ಸೇನೆ ಗುಂಡು ಹಾರಿಸಿ ಕೊಂದಿದೆ. ಈ ಮೂಲಕ ಭಾರತಕ್ಕೆ ಅಕ್ರಮ ಪ್ರವೇಶ ಮಾಡುವ ಯತ್ನಕ್ಕೆ ತಡೆಯೊಡ್ಡಿದೆ.

ಎಲ್‌ಒಸಿ ವಲಯದಲ್ಲಿ ಉಗ್ರರು ಒಳ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು. ಹೀಗಾಗಿ, ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ. ಸೇನೆಯ ಇಬ್ಬರು ಯೋಧರು ಮತ್ತು ಬಿಎಸ್‌ಎಫ್ನ ಯೋಧ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ:ಡೆತ್‌ನೋಟ್ ಬರೆದಿಟ್ಟು ಬೆಂಗಳೂರು ವಿವಿಯ ನಿವೃತ್ತ ಪ್ರೊಫೆಸರ್ ನೇಣಿಗೆ ಶರಣು

ಮತ್ತೂಂದೆಡೆ ಕಥುವಾ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ರಾತ್ರಿ 9 ಗಂಟೆಯಿಂದ ಭಾನುವಾರ ಬೆಳಗ್ಗೆ 5 ಗಂಟೆಯ ವರೆಗೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿವೆ. ಅದಕ್ಕೆ ಬಿಎಸ್‌ಎಫ್ ಸಿಬ್ಬಂದಿ ಸೂಕ್ತವೆಂಬಂತೆ ಪ್ರತಿ ಗುಂಡಿನ ದಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next