Advertisement
ಎಲ್ ನಿನೋ ಪರಿಣಾಮವಾಗಿ ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಬಿಸಿಗಾಳಿಯ ಪ್ರಕೋಪ ಇರಲಿದೆ. ಆದರೆ ಕಟಾವಿಗೆ ಬಂದಿರುವ ಗೋಧಿ ಬೆಳೆಯ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಈ ಕುರಿತಾಗಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ಮುಂಬರುವ 3 ತಿಂಗಳ ಕಾಲ ದೇಶದಲ್ಲಿ ವೈಪರೀತ್ಯ ಹವಾಮಾನ ಇರಲಿದೆ. ಇದು ನಮ್ಮೆಲ್ಲರಿಗೂ ಸವಾಲಿನ ದಿನಗಳಾಗಲಿವೆ. ಅತ್ಯಂತ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿ ನಾವು ಇಂತಹ ವೈಪರೀತ್ಯಗಳಿಗೆ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
Related Articles
ಏಪ್ರಿಲ್ನಿಂದ ಜೂನ್ವರೆಗೂ ಇದರ ಪ್ರಭಾವ ಇರಲಿದೆ ಎಂದು ಐಎಂಡಿ ಹೇಳಿದೆ.
Advertisement
ಇದೇ ಅವಧಿಯಲ್ಲಿ ಹಿಮಾಲಯದ ತಪ್ಪಲು ಹಾಗೂ ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರಲಿದೆ. ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ ಕೊಂಚ ಹೆಚ್ಚು ಮಳೆ (8-11 ಸೆ.ಮೀ.) ಬೀಳಲಿದೆ ಎಂದು ಇಲಾಖೆ ಹೇಳಿದೆ.
ಗೋಧಿ ಬೆಳೆಗೆ ಹಾನಿ ಇಲ್ಲ: ಅತಿಯಾದ ತಾಪಮಾನದಿಂದಾಗಿ ಸದ್ಯ ಕಟಾವಿನ ಹಂತಕ್ಕೆ ತಲುಪಿರುವ ಗೋಧಿ ಬೆಳೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆ.ನಷ್ಟು ಉಷ್ಣಾಂಶ ಹೆಚ್ಚಿರಲಿದೆ. ಹೀಗಾಗಿ ಇದು ಗೋಧಿ ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.