Advertisement

3 DCM ಕುರಿತು ಸಚಿವ ಕೆ.ರಾಜಣ್ಣ ಅವರೇ ಉತ್ತರ ನೀಡಬೇಕು : ಡಿ.ಕೆ. ಸುರೇಶ್

03:31 PM Sep 15, 2023 | Team Udayavani |

ಚನ್ನಪಟ್ಟಣ: ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಮಾಡಬೇಕು ಎಂದು ಸಚಿವ ಕೆ.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ”ಈ ಬಗ್ಗೆ ಸಚಿವ ಕೆ. ರಾಜಣ್ಣ ಅವರೇ ಉತ್ತರ ನೀಡಬೇಕು.ಇದು ಅವರ ಹೇಳಿಕೆ. ನಾನು ಲೋಕಸಭಾ ಸದಸ್ಯ ಅಷ್ಟೇ. ಸರ್ಕಾರ ನಡೆಸುತ್ತಿರುವವರು ರಾಜಣ್ಣ.ಈಗಾಗಿ ಅವರೇ ಉತ್ತರ ಹೇಳಬೇಕು” ಎಂದು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಹೆಬ್ಬಾಳ – ಚಾಮರಾಜನಗರ ರೈಲು ಹಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಮಂತ್ರಿಗಳ ಬಳಿ ಮಾತನಾಡಿದ್ದೇನೆ.ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕು. ಭೂ ಸ್ವಾಧೀನ ವೆಚ್ಚ ಹೆಚ್ಚಾಗಿದೆ. 2ಸಾವಿರ ಕೋಟಿ ಹಣ ಭೂ ಸ್ವಾಧೀನಕ್ಕೆ (land acquisition) ಬೇಕಾಗಬಹುದು.ಇದರ ಅರ್ಧ ಹಣವನ್ನ ರಾಜ್ಯಸರ್ಕಾರ ಕಟ್ಟಬೇಕಾಗುತ್ತದೆ.ಮೊದಲು ಕೇಂದ್ರ ಸರ್ಕಾರ ರೈಲ್ವೆ ಯೋಜನೆ‌ ಕೈಬಿಟ್ಟಿತ್ತು.ಕೇಂದ್ರಕ್ಕೆ‌ ಒತ್ತಾಯ ಮಾಡಿ ಯೋಜನೆ ಅನುಷ್ಠಾನಕ್ಕೆ ಬಂದಿದೆ.ಭೂ ಸ್ವಾಧೀನ ಮಾಡಲು ನಾನು ಒತ್ತಾಯ ಮಾಡುತ್ತೇನೆ” ಎಂದರು.

”ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕೆಲ ಮುಖಂಡರು ಕಾಂಗ್ರೆಸ್ ಸೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸದಾಕಾಲವೂ ಹೆಚ್ಚು ಗಮನಹರಿಸುತ್ತದೆ.ನಮ್ಮ ಪಕ್ಷದ ಸಿದ್ದಾಂತ ನಂಬಿ ಬಂದವರಿಗೆ ಸ್ವಾಗತ ಮಾಡುತ್ತೇವೆ.ಚುನಾವಣೆ ಬರುತ್ತವೆ, ಹೋಗುತ್ತವೆ.ಆದರೆ ಬೂತ್ ಮಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಸಂಘಟನೆಗೆ ಹೊತ್ತು ನೀಡುತ್ತಾರೆ.ಈಗಾಗಿ ಪಕ್ಷ ಸಂಘಟನೆಗೆ ಜಾಸ್ತಿ ಮಾಡುತ್ತೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next