Advertisement

Road Mishap: ಟ್ರಕ್ ಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬಸ್ಸು… 3 ಮೃತ್ಯು, 14 ಮಂದಿಗೆ ಗಾಯ

04:15 PM Jul 13, 2024 | Team Udayavani |

ಒಡಿಶಾ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಟ್ರಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಮೃತಪಟ್ಟು ಹದಿನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಮಯೂರ್‌ಭಂಜ್ ಪ್ರದೇಶದಲ್ಲಿ ನಡೆದಿದೆ.

Advertisement

ವರದಿಗಳ ಪ್ರಕಾರ, ಬಸ್ ಹೈದರಾಬಾದ್‌ನಿಂದ ಗಯಾ ಕಡೆಗೆ ಹೋಗುತ್ತಿತ್ತು ಬುದಿಖ್ಮರಿ ಚೌಕದ ಬಳಿ ರಾಷ್ಟ್ರೀಯ ಹೆದ್ದಾರಿ 18 ರಲ್ಲಿ ಮುಂಜಾನೆ 5.30 ರ ಸುಮಾರಿಗೆ ಟ್ರಕ್ ಗೆ ಡಿಕ್ಕಿ ಹೊಡೆದಿದೆ, ಬಸ್ಸಿನಲ್ಲಿ ಸುಮಾರು 20 ಯಾತ್ರಾರ್ಥಿಗಳಿದ್ದರು ಎಂದು ಹೇಳಲಾಗಿದೆ. ಬಸ್ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ಪ್ರಯಾಣಿಕರನ್ನು ಬರಿಪಾಡಾದ ಪಂಡಿತ್ ರಘುನಾಥ್ ಮುರ್ಮು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರಲ್ಲಿ ಬಸ್ಸು ಚಾಲಕನ ಗುರುತು ಪತ್ತೆಯಾಗಿದ್ದು ಹೈದರಾಬಾದ್ ಮೂಲದ ಉದಯ್ ಕುಮಾರ್ ಎನ್ನಲಾಗಿದೆ, ಉಳಿದ ಇಬ್ಬರ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next