Advertisement

ಮೂವರನ್ನು ಹತ್ಯೆಗೈದ ಗೋವು ಕಳ್ಳರು?

06:00 AM Jul 08, 2018 | Team Udayavani |

ಶಿಲ್ಲಾಂಗ್‌: ಮೇಘಾಲಯದಲ್ಲಿ ಗೋವು ಕಳ್ಳಸಾಗಣೆದಾರರು ಎನ್ನಲಾದ ತಂಡವೊಂದು ಗ್ರಾಮದ ಮುಖ್ಯಸ್ಥ, ಇತರ ಮೂವರನ್ನು  ಕೊಲೆಗೈದಿದೆ. ಬಾಂಗ್ಲಾದೇಶದ ಗಡಿಯ ವೆಸ್ಟ್‌ ಜೈಂತಿಯಾ ಹಿಲ್ಸ್‌ ಜಿಲ್ಲೆಯಲ್ಲಿ ಈ ಕೃತ್ಯ ಜರುಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಮೂವರು ಚಿಂತಾಜನಕ  ಸ್ಥಿತಿಯಲ್ಲಿದ್ದಾರೆ. ಈ 6 ಜನ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಗ್ರಾಮಕ್ಕೆ ಹಿಂದಿರುಗುವ ವೇಳೆ ಘಟನೆ ನಡೆದಿದೆ. ಇತ್ತೀಚೆಗೆ ಗ್ರಾಮದಲ್ಲಿ ಹಸು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಥಳಿಸಲಾಗಿತ್ತು. ಈ  ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದೆನ್ನಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next