Advertisement

ಥಾಣೆ: ಗಟಾರಕ್ಕಿಳಿದ ಮೂವರು ಸಾವು, ಐವರು ಆಸ್ಪತ್ರೆಗೆ

09:04 AM May 11, 2019 | Team Udayavani |

ಥಾಣೆ : ನಗರದ ಧೋಕಾಲಿ ಪ್ರದೇಶದಲ್ಲಿ ಗಟಾರದ ಸ್ವಚ್ಚತೆಗಿಳಿದಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಸ್ವಚ್‌ಛತೆಗೆಂದು 11 ಮಂದಿ ಕಾರ್ಮಿಕರು ಟ್ಯಾಂಕ್‌ಗೆ ಇಳಿದಿದ್ದರು , ಆ ಪೈಕಿ ಟಾಕ್ಸಿಕ್‌ ಗ್ಯಾಸ್‌ ಸೇವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಎನ್‌ಐ ವರದಿಯಂತೆ, ಮೃತರು ಅಮಿತ್‌ ಪುಹಾಲ್‌(20), ಅಮನ್‌ ಬಾದಲ್‌(21) ಮತ್ತು ಅಜಯ್‌ ಬುಂಬಾಕ್‌(24) ಎಂದು ಗುರುತಿಸಲಾಗಿದೆ.

ಇದೇ ತಿಂಗಳ ಆರಂಭಕ್ಕೆ ಇಂತಹದ್ದೆ ಒಂದು ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿತ್ತು, ಇಬ್ಬರು ಸಾವನ್ನಪ್ಪಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next