Advertisement

ನಡುರಸ್ತೇಲಿ ಎತ್ತನ್ನು ಕಡಿದು ತಿಂದ “ಕೈ”ಕಾರ್ಯಕರ್ತರ ಸಸ್ಪೆಂಡ್

01:02 PM May 29, 2017 | Sharanya Alva |

ತಿರುವನಂತಪುರ(ಕೇರಳ): ವಧೆಗಾಗಿ ಮಾರುಕಟ್ಟೆಯಲ್ಲಿ ಗೋವುಗಳನ್ನು ಮಾರಾಟ ಹಾಗೂ ಖರೀದಿ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಸಾರ್ವಜನಿಕ ಸ್ಥಳದಲ್ಲೇ ಎತ್ತನ್ನು ಹತ್ಯೆಗೈದು ಪ್ರತಿಭಟನೆ ನಡೆಸಿದ್ದ ಕೇರಳ ಯೂತ್ ಕಾಂಗ್ರೆಸ್ ನ ಮೂವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡ ರಿಜಿಲ್ ಮಾಕುಟೈ ಸೇರಿದಂತೆ ಇಬ್ಬರನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ರವಾನಿಸಿತ್ತು.  ಶನಿವಾರ ಸಾರ್ವಜನಿಕವಾಗಿಯೇ ಎತ್ತನ್ನು ಕಡಿದು ಅದರ ಮಾಂಸವನ್ನು ರಸ್ತೆ ಬದಿಯಲ್ಲೇ ಬೇಯಿಸಿ ಹಂಚಿರುವುದು ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು.

ಈ ಘಟನೆಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಕಣ್ಣೂರುನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಕಣ್ಣೂರು ನಗರ ಪೊಲೀಸರು ರಿಜಿಲ್ ಮಾಕುಟೈ ಸೇರಿದಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಿದ್ದರು.

ಸಾರ್ವಜನಿಕವಾಗಿ ಅಶಿಸ್ತು, ಸಾರ್ವಜನಿಕವಾಗಿ ಪ್ರಾಣಿ ಹತ್ಯೆ ಕಾಯ್ದೆಯ ಉಲ್ಲಂಘನೆ ಆರೋಪದಡಿ ಸೆಕ್ಷನ್ 120ಎ ಅಡಿಯಲ್ಲಿ ಪೊಲೀಸರು ದೂರನ್ನು ದಾಖಲಿಸಿದ್ದರು. ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾತೀಶ್ ಸಿಸಿ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next