Advertisement
ಉಗ್ರರ ವಿರುದ್ಧ ಭದ್ರತಾ ಪಡೆಗಳು ಹೋರಾಟ ನಡೆಸುತ್ತಿದ್ದರೂ, ಒಂದು ದಶಕದಿಂದ ಈಚೆಗೆ ಒಂದೇ ದಿನ 12 ಮಂದಿಯನ್ನು ಕೊಂದಿದ್ದು ಇದೇ ಮೊದಲು. ಶೋಪಿಯಾನ್, ಅನಂತನಾಗ್ನಲ್ಲಿ ಉಗ್ರರ ಕೇಂದ್ರ ಸ್ಥಾನ ವಾಗಿದ್ದು, ಸ್ಥಳೀಯರ ಬೆಂಬಲವಿಲ್ಲದೇ ಇಲ್ಲಿ ಉಗ್ರರು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಭಾನುವಾರದ ಕಾರ್ಯಾಚರಣೆಯು ಸ್ಥಳೀಯರಿಗೆ ಮಾತ್ರವಲ್ಲದೆ, ಬದುಕುಳಿದಿರುವ ಇತರೆ ಉಗ್ರರಿಗೂ ಭೀತಿ ಉಂಟುಮಾಡಿದೆ. ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳು ವವರಿಗೂ ಎಚ್ಚರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಕೊಂದು ಹಾಕಿದ ಭಾರತೀಯ ಸೇನೆಯ ಕ್ರಮ ಪೈಶಾಚಿಕ ಕೃತ್ಯ ಎಂದು ಪಾಕಿಸ್ತಾನ ಪ್ರಧಾನಿ ಶಹೀದ್ ಕಖಾನ್ ಅಬ್ಟಾಸಿ ಟೀಕಿಸಿದ್ದಾರೆ.
“”ನಾಗರಿಕರ ಮೇಲೆ ಪೆಲೆಟ್ ಗನ್ ಪ್ರಯೋಗಿಸಿದ್ದನ್ನೂ ಖಂಡಿಸಿರುವ ಅವರು, ಕಾಶ್ಮೀರದಲ್ಲಿ ಪ್ರತಿಭಟನೆಗೂ ಅವಕಾಶ ನಿರಾಕರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಥಾ ಸ್ಥಿತಿ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವೀಕ್ಷಕರ ತಂಡ ಕಳುಹಿಸಬೇಕು. ಅದಕ್ಕೆ ಭಾರತ ಅನುಮತಿ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
Advertisement
ಸೇಡು ಖಚಿತ ಎಂದ ಹಫೀಜ್ಶೋಪಿಯಾನ್ನಲ್ಲಿ ಉಗ್ರರ ಸದೆ ಬಡಿದಿದ್ದರಿಂದ ವ್ಯಗ್ರಗೊಂಡಿರುವ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್, ಉಗ್ರರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಸಯೀದ್, ಭಾರತದ ವಿರುದ್ಧ ಯುದ್ಧ ಸಾರುತ್ತೇವೆ ಎಂದಿದ್ದಾನೆ. ಇನ್ನೊಂದೆಡೆ ಭಾರತದಲ್ಲಿನ ಕಾಶ್ಮೀರ ಜನರ ಬಗ್ಗೆ ಪಾಕ್ ಸರ್ಕಾರ ಕಾಳಜಿ ಹೊಂದಿಲ್ಲ ಎಂದೂ ಆರೋಪಿಸಿದ್ದಾನೆ.