Advertisement

ರಾಜಸ್ಥಾನ ಕೋರ್ಟ್‌ನಲ್ಲಿ ಹಾಡುಹಗಲೇ ಗುಂಡು ಹಾರಾಟ: ಮೂವರಿಗೆ ಗಾಯ

04:58 PM Jan 17, 2018 | Team Udayavani |

ಚುರು/ಸಿಕಾರ್‌ (ರಾಜಸ್ಥಾನ) : ಚುರು ಜಿಲ್ಲೆಯ ವಿಚಾರಣಾ ನ್ಯಾಯಾಲಯದಲ್ಲಿ ಆವರಣದಲ್ಲಿಂದು ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡು ಹಾರಾಟದಲ್ಲಿ ಓರ್ವ ವಕೀಲ ಸಹಿತ ಮೂವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. 

Advertisement

ಈ ಗುಂಡು ಹಾರಾಟ ಪ್ರಕರಣವು ಸದೂಲ್‌ಪುರ ಪಟ್ಟಣದಲ್ಲಿ ತೀವ್ರ ಭಯ, ಆತಂಕವನ್ನು ಸೃಷ್ಟಿಸಿತು. 

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿಚಾರಣಾಧೀನ ಕೈದಿ ಅಜಯ್‌ ಜೈತ್‌ಪುರ ಎಂಬಾತನನ್ನು ಕೋರ್ಟಿಗೆ ತರುತ್ತಿದ್ದಾಗ ಗುಂಡು ಹಾರಾಟ ನಡೆಯಿತು. 

ಕನಿಷ್ಠ ಮೂರು – ನಾಲ್ಕು ಮಂದಿ ಅಜಯ್‌ ಜೈತ್‌ಪುರನ ಮೇಲೆ ಗುಂಡು ಹಾರಿಸಿದರು. ಅವರ ಗುಂಡು ವಕೀಲ ರತನ್‌ ಲಾಲ್‌ ಮತ್ತು ಇನ್ನೋರ್ವ ವ್ಯಕ್ತಿಗೂ ಬಡಿದು ಅವರು ಗಂಭೀರವಾಗಿ ಗಾಯಗೊಂಡರು.

ಒಡನೆಯೇ ಹಂತಕರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಕೋರ್ಟ್‌ ಆವರಣದ ಹೊರಗೆ ನಿಲ್ಲಿಸಲಾಗಿದ್ದ ಎಸ್‌ಯುವಿ ವಾಹನವನ್ನು ಏರಿ ಪರಾರಿಯಾದರು. ಇದು ಪೂರ್ವ ದ್ವೇಷದಿಂದ ನಡೆದಿರುವ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next