Advertisement

ಮೂವರು ಹೈಕೋರ್ಟ್‌ ನ್ಯಾಯಾಧೀಶರಿಗೆ ಸುಪ್ರೀಂ ಭಡ್ತಿ

11:48 AM Aug 04, 2018 | udayavani editorial |

ಹೊಸದಿಲ್ಲಿ : ಮೂವರು ಹೈಕೋರ್ಟ್‌ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ; ಇದರೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಮೂರ್ತಿಗಳಸಂಖ್ಯೆ 25ಕ್ಕೇರಿದೆ.

Advertisement

ಉತ್ತರಾಖಂಡ ಹೈಕೋರ್ಟ್‌ ಚೀಫ್ ಜಸ್ಟಿಸ್‌ ಕೆ ಎಂ ಜೋಸೆಫ್, ಮದ್ರಾಸ್‌ ಹೈಕೋರ್ಟ್‌ ಚೀಫ್ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಮತ್ತು ಒರಿಸ್ಸಾ ಹೈಕೋರ್ಟ್‌ ಚೀಫ್ ಜಸ್ಟಿಸ್‌ ವಿನೀತ್‌ ಶರಣ್‌ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಅಧಿಸೂಚನೆಯನ್ನು ಇಂದು ಹೊರಡಿಸಲಾಯಿತು. 

ಈ ನೂತನ ನ್ಯಾಯಮೂರ್ತಿಗಳ ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ನಿನ್ನೆ ಶುಕ್ರವಾರ ರಾತ್ರಿ ಸಹಿ ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next