Advertisement

ಕಾರವಾರ ನೌಕಾನೆಲೆಗೆ ನುಗ್ಗಿದ ಮೂವರು ಅಪರಿಚಿತರು?ವ್ಯಾಪಕ ಶೋಧ,ಆತಂಕ 

03:40 PM Jun 22, 2017 | Team Udayavani |

ಕಾರವಾರ:ಇಲ್ಲಿನ ಅರಗಾ ಗ್ರಾಮದಲ್ಲಿರುವ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಗುರುವಾರ ಬೆಳಗ್ಗೆ 
ಮೂವರು ಅಪರಿಚಿತರು ನುಗ್ಗಿದ್ದಾರೆ ಎಂದು ಹೇಳಲಾಗಿದ್ದು,ಆತಂಕಕ್ಕೆ ಕಾರಣವಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66 ಕ್ಕೆ  ಹೊಂದಿಕೊಂಡಿರುವ ತಡೆಗೋಡೆಯನ್ನು ಹಾರಿ ಮೂವರು  ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನೌಕಾಪಡೆಯ ಸಿಬಂದಿಗಳು ನೌಕಾನೆಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದು ವ್ಯಾಪಕ ಶೋಧ ನಡೆಸುತ್ತಿದ್ದಾರೆ. 

ಶಿಥಿಲಗೊಂಡಿದ್ದ ತಡೆಗೋಡೆಯನ್ನು ಹಾರಿ ಒಳಪ್ರವೇಶಿಸಿರುವುದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next