Advertisement

ಶ್ರೀನಗರ ಬೈ ಎಲೆಕ್ಷನ್‌:ಮತದಾನದ ವೇಳೆ ಹಿಂಸಾಚಾರ ;3 ಬಲಿ 

01:51 PM Apr 09, 2017 | Team Udayavani |

ಶ್ರೀನಗರ : ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಭಾನುವಾರ ಉಪಚುನಾವಣೆ ನಡೆಯುತ್ತಿದ್ದು, ಮತದಾನದ ವೇಳೆ ಹಿಂಸಾಚಾರ ಸಂಭವಿಸಿದ್ದು, ಭದ್ರತಾ ಪಡೆಗಳ ಗುಂಡಿಗೆ ಹಿಂಸಾ ನಿರತ ಮೂವರು ಯುವಕರು ಬಲಿಯಾಗಿ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

Advertisement

ಬುದ್ಗಾಮ್‌ನ ವಿವಿಧೆಡೆ ಯುವಕರು ಹಿಂಸೆಗಿಳಿದಿದ್ದು , ಈ ವೇಳೆ ಭದ್ರತಾ ಸಿಬಂದಿಗಳೊಂದಿಗೆ ಘರ್ಷಣೆ ನಡೆದಿದೆ. ಮತಗಟ್ಟೆಯ ಮೇಲೆ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆದಿರುವ ಬಗ್ಗೆ ವರದಿಯಾಗಿದೆ.

ಮತದಾನದ ಹಿನ್ನಲೆಯಲ್ಲಿ  ಶ್ರೀನಗರ ಕ್ಷೇತ್ರದೆಲ್ಲೆಡೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next