Advertisement

ಮಥುರಾ : 22 ತಾಸಲ್ಲಿ ಅಪಹೃತ ಬಾಲಕನ ರಕ್ಷಣೆ; ಮೂವರ ಸೆರೆ

04:30 PM Apr 24, 2018 | udayavani editorial |

ಮಥುರಾ : ಇಪ್ಪತ್ತು ಲಕ್ಷ ರೂ. ಒತ್ತೆ ಹಣ ಪಡೆದು ಫ್ಯಾಕ್ಟರಿ ತೆರೆಯುವ ಯೋಜನೆಯಲ್ಲಿ ಎಂಟು ವರ್ಷ ಪ್ರಾಯದ ಬಾಲಕನನ್ನು ಅಪಹರಿಸಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು  22 ತಾಸುಗಳ  ಒಳಗೆ ಬಾಲಕನನ್ನು ರಕ್ಷಿಸಿದ್ದಾರೆ. 

Advertisement

ಬಂಧಿತರನ್ನು ಕೃಷ್ಣ ಕಾಂತ್‌, ಇಂದರ್‌ ಮತ್ತು ವಿನೀತ್‌ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಮೆಹರಾನಾ ಗ್ರಾಮದ ಹೊರವಲಯದಿಂದ ಲಕ್ಷ್ಮಣ್‌ ಎಂಬ 8 ವರ್ಷದ ಬಾಲಕನನ್ನು ಅಪಹರಿಸಿದ್ದರು. 20 ಲಕ್ಷ ರೂ. ಒತ್ತೆ ಹಣಕ್ಕಾಗಿ ಬಾಲಕನ ತಂದೆಗೆ ಇವರು ಕರೆ ಮಾಡಿದಾಗ ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್ ಆಗಿತ್ತು. ಹಾಗಾಗಿ ಇವರು ಒತ್ತೆ ಸೆರೆ ಪ್ರಕರಣ ಫ‌ಲಿಸದೇ ಹೋಯಿತು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಆದಿತ್ಯ ಶುಕ್ಲಾ ತಿಳಿಸಿದ್ದಾರೆ. 

ಪೊಲೀಸರು ಮೂವರು ದುಷ್ಕರ್ಮಿಗಳ ವಿರುದ್ದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next