Advertisement

Thief: ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ‘ಅಜ್ಜಿ’

06:52 PM Jun 02, 2024 | Team Udayavani |

ಶಿವಮೊಗ್ಗ : ಒಡವೆ ಖರೀದಿಸುವ ನೆಪದಲ್ಲಿ ಖತರ್ನಾಕ್ ಕಳ್ಳಿಯರ ಚಿನ್ನದ ಅಂಗಡಿಗೆ ಬಂದು ಸುಮಾರು ಮೂರುವರೆ ಲಕ್ಷ ಮೌಲ್ಯದ ಚಿನ್ನದ ಒಡುವೆ ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ನಡೆದಿದೆ.

Advertisement

ಇಲ್ಲಿನ ಸಂಪತ್ ಜುವೆಲ್ಲರ್ಸ್ ಗೆ ಬಂದ ಕಳ್ಳಿಯರ ತಂಡ ಒಡವೆ ಖರೀದಿಸುವ ನೆಪದಲ್ಲಿ ವಿವಿಧ ಒಡವೆಗಳನ್ನು ನೋಡಿದ್ದಾರೆ ಈ ವೇಳೆ ಕಳ್ಳಿಯರ ಗ್ಯಾಂಗ್ ನಲ್ಲಿದ್ದ ಅಜ್ಜಿ ತನ್ನ ಕೈಚಳಕ ತೋರಿಸಿದ್ದು ಅಂಗಡಿ ಸಿಬಂದಿ ಒಡವೆಗಳನ್ನು ತೋರೋಸುವ ವೇಳೆ ಕಪಾಟಿನ ಬಾಗಿಲು ತೆರೆದು 67 ಗ್ರಾಂ ತೂಕದ ಬಂಗಾರದ ಒಡವೆಗಳು ಇದ್ದ ಬಾಕ್ಸ್ ಒಂದನ್ನು ಎಗರಿಸಿದ್ದಾರೆ. ಬಳಿಕ ಸೀರೆಯ ಒಳಗೆ ಬಚ್ಚಿಟ್ಟು ಕೆಲ ಹೊತ್ತಿನ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಘಟನೆ ಕಳೆದ ಶುಕ್ರವಾರ ನಡೆದಿದ್ದು ಸಿಸಿಟಿವಿಯಲ್ಲಿ ಅಜ್ಜಿಯ ಕೃತ್ಯ ಬೆಳಕಿಗೆ ಬಂದಿದೆ.

ಈ ಎಲ್ಲಾ ಘಟನೆಯ ಸೃಶ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಚಾರ ಗೊತ್ತಾಗುತ್ತಿದ್ದಂತೆ ಅಂಗಡಿ ಮಾಲೀಕರು ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: Fraud Case: ಸಾಲ ಮಂಜೂರಾತಿ ಹೆಸರಲ್ಲಿ ಯುವಕನಿಗೆ 75 ಸಾವಿರ ರೂ. ವಂಚನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next