Advertisement

Fraud: ಖಾತೆದಾರರ ಗಮನಕ್ಕೆ ಬಾರದೆಯೇ 3.25 ಲಕ್ಷ ರೂ. ವಂಚನೆ

07:46 PM Aug 17, 2024 | Team Udayavani |

ಕಾಪು: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿರುವ ಉದ್ಯಾವರ ನಿವಾಸಿ ರಮೇಶ್‌  ಖಾತೆಯಿಂದ ಅವರ ಗಮನಕ್ಕೆ ಬಾರದಂತೆ 3.25 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ರಮೇಶ್‌ ಆ. 15ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ ಬ್ಯಾಂಕ್‌ನಿಂದ ಮೆಸೇಜ್‌ ಬಂದಿದ್ದು,  ಅವರ ಖಾತೆಯಿಂದ  ಎರಡು ಬಾರಿ 2.25 ಹಾಗೂ  1 ಲಕ್ಷ ರೂಪಾಯಿ  ಐಎಂಪಿಎಸ್‌ ಮೂಲಕ  ವರ್ಗಾವಣೆಯಾಗಿರುವುದಾಗಿ ತಿಳಿಯಿತು.

ತನ್ನ ಬ್ಯಾಂಕ್‌ ಖಾತೆಯ ಮಾಹಿತಿ ಅಥವಾ ಇನ್ನಿತರ ಮಾಹಿತಿಯನ್ನು ಯಾರಿಗೂ ನೀಡಿರುವುದಿಲ್ಲ. ಆದರೂ ಖಾತೆಯಿಂದ 3,25,000/- ರೂಪಾಯಿ ಬೇರೆ ಯಾರಧ್ದೋ ಖಾತೆಗೆ ವರ್ಗಾವಣೆಯಾಗಿದೆ ಎಂದು ರಮೇಶ್‌ ಅವರು ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next