Advertisement

ಆರು ತಿಂಗಳಲ್ಲಿ ಲೋಕಾಯುಕ್ತಕ್ಕೆ 2952 ದೂರು

11:44 AM Oct 04, 2017 | Team Udayavani |

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಲಂಚಗುಳಿತನ, ಅಧಿಕಾರ ದುರ್ಬಳಕೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧದ ದೂರುಗಳು ಲೋಕಾಯುಕ್ತಕ್ಕೆ ಹರಿದು ಬರುತ್ತಿದ್ದು, ಕಳೆದ ಫೆಬ್ರವರಿಯಿಂದ ಸೆಪ್ಟೆಂಬರ್‌ 21ರ ನಡುವೆ ಬರೋಬ್ಬರಿ 2952 ದೂರುಗಳು ದಾಖಲಾಗಿವೆ.

Advertisement

ಈ ಮುಂಚೆ ಲೋಕಾಯುಕ್ತದಲ್ಲಿ 7174 ದೂರುಗಳು ಬಾಕಿಯಿದ್ದು, ಈ ವರ್ಷ ಸಾರ್ವಜನಿಕರು ಹಾಗೂ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವುದೂ ಸೇರಿದಂತೆ  ದೂರುಗಳು 2952ಕ್ಕೂ ಹೆಚ್ಚಿವೆ. ಈ ಪೈಕಿ 3832 ದೂರುಗಳನ್ನು ಇತ್ಯರ್ಥಪಡಿಸಿದ್ದು, ಇನ್ನೂ 6294 ದೂರುಗಳ ವಿಚಾರಣೆ ಬಾಕಿ ಉಳಿದುಕೊಂಡಿದೆ.

ಅದೇ ರೀತಿ ವಿಚಾರಣಾ ಹಂತದಲ್ಲಿದ್ದ 2695 ಪ್ರಕರಣಗಳಿಗೆ ಈ ಬಾರಿ 860 ಕೇಸ್‌ಗಳು ಸೇರ್ಪಡೆಗೊಂಡಿವೆ. ಈ ಪ್ರಕರಣಗಳಲ್ಲಿ 370 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು 3185  ಕೇಸ್‌ಗಳ ವಿಚಾರಣೆ ಪ್ರಗತಿಯಲ್ಲಿವೆ.ಲೋಕಾಯುಕ್ತದಲ್ಲಿ ಬಾಕಿ ಉಳಿದುಕೊಂಡಿರುವ ಕೇಸ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದರೂ ವಿಚಾರಣಾಧಿಕಾರಿಗಳ ಕೊರತೆಯಿದೆ.

ಹೀಗಾಗಿ ಜಿಲ್ಲಾನ್ಯಾಯಾಧೀಶರ ಹುದ್ದೆಯ 9 ಮಂದಿಯನ್ನು ವಿಚಾರಣಾಧಿಕಾರಿಗಳು ಹಾಗೂ 3 ಮಂದಿ ರೀಸರ್ಚ್‌ ಅಸಿಸ್ಟೆಂಟ್‌ಗಳು, ಅವರಿಗೆ ನೆರವಾಗಲು ಅಗತ್ಯವಾದ ಸಿಬ್ಬಂದಿ ಸೇರಿ ಒಟ್ಟು 36 ಮಂದಿಯನ್ನು ನೇಮಕಗೊಳಿಸುವಂತೆ ಸರ್ಕಾರಕ್ಕೆ ಪತ್ರಬರೆಯಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಲೋಕಾಯುಕ್ತ ಪಿ.ವಿಶ್ವನಾಥಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next