Advertisement

ಪ.ಜಾತಿ, ಪಂಗಡದವರ ಅಭಿವೃದ್ಧಿಗೆ 27,699 ಕೋಟಿ

06:44 AM Jun 06, 2020 | Lakshmi GovindaRaj |

ತುಮಕೂರು: 2020-21ನೇ ಸಾಲಿನಲ್ಲಿ ರಾಜ್ಯದಲ್ಲಿರುವ ಪ.ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಅಭಿವೃದ್ಧಿಗಾಗಿ 27699 ಕೋಟಿ ರೂ.ಗಳನ್ನು ಮೀಸಲಿಟಿದ್ದು, ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು  ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದರು.

Advertisement

ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಡಾ.ಬಿ. ಆರ್‌.ಅಂಬೇಡ್ಕರ್‌ ಭವನ ಮತ್ತು ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳು ಮತ್ತು ವಸತಿ  ಶಾಲೆಗಳ ನೂತನ ಕಟ್ಟಡಗಳ ಹಾಗೂ ಪದವಿ ಪೂರ್ವ ಕಾಲೇಜಿನ ಕಟ್ಟಡಗಳ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಜಿಲ್ಲಾಮಟ್ಟದ ವನ ಮಹೋತ್ಸವದಲ್ಲಿ ಮಾತನಾಡಿದರು.

1600 ಮಕ್ಕಳಿಗೆ ಅನುಕೂಲ: ಪಾವಗಡದಲ್ಲಿ ಸುಮಾರು 88 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಲಯಗಳು, ಪಿಯು ಕಾಲೇಜು ಹಾಗೂ ಸೆಕೆಂಡರಿ ಸ್ಕೂಲ್‌ ಕಟ್ಟಡಗಳ ಉದ್ಘಾಟನೆಯಾಗಿದೆ. ಇದರಿಂದ ಸುಮಾರು ಎಸ್‌ಸಿ-ಎಸ್‌ಟಿ  ಜನಾಂಗದ 1600 ಮಕ್ಕಳಿಗೆ ಓದಲು ವ್ಯವಸ್ಥೆಯಾಗುತ್ತದೆ ಎಂದರು.

6.11 ಲಕ್ಷ ಫ‌ಲಾನುಭವಿಗಳಿಗೆ ಸೌಲಭ್ಯ: ಪ್ರೌಢ ಶಿಕ್ಷಣ ಇಲಾಖೆಯಿಂದ 939 ಕೋಟಿ ವೆಚ್ಚದಲ್ಲಿ ಪ.ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸಮವಸOಉ, ಸೈಕಲ್‌ ಹಾಗೂ ಮಧ್ಯಾಹ್ನದ ಬಿಸಿಯೂಟ ಇತ್ಯಾದಿ ಸೇರಿದಂತೆ ಒಟ್ಟು 23 ಲಕ್ಷ  ಮಕ್ಕಳಿಗೆ 2019-20ನೇ ಸಾಲಿನಲ್ಲಿ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ. ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 2231 ಕೋಟಿ ರೂ. ವೆಚ್ಚದಲ್ಲಿ ಸ್ವತ್ಛ ಭಾರತದ ಅಭಿಯಾನ ಯೋಜನೆ, ಶುದಟಛಿ ಕುಡಿಯುವ ನೀರು ಹಾಗೂ ನರೇಗಾ ಕಾರ್ಯಕ್ರಮ  ಒಟ್ಟು 6.11 ಲಕ್ಷ ಫ‌ಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿ ದೆ ಎಂದು ತಿಳಿಸಿದರು.

47,711 ಫ‌ಲಾನುಭವಿಗೆ ಸೌಲಭ್ಯ: ವಸತಿ ಯೋಜನೆಯಡಿ 1219 ಕೋಟಿ ರೂ.ಗಳಲ್ಲಿ 29,618 ಮನೆಗಳನ್ನು ಪ.ಜಾತಿಯವರಿಗೆ ಹಾಗೂ 13,093 ಮನೆಗಳನ್ನು ಪರಿಶಿಷ್ಟ ಪಂಗಡದವರಿಗೆ ಒಟ್ಟು 47,711 ಫ‌ಲಾನುಭವಿಗೆ ಈ ಸೌಲಭ್ಯ  ಒದಗಿಸಲಾಗಿದೆ. ಲೋಕೊ  ಪಯೋಗಿ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ವತಿಯಿಂದ ಮೂಲಭೂತ ಸೌಕರ್ಯಗಳಿಗಾಗಿ 4,669 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು  ತಿಳಿಸಿದರು.

Advertisement

ಟ್ರೈನಿ ಎಂಜಿನಿಯರ್‌ಗಳ ನೇಮಕ: ಲೋಕೋಪಯೋಗಿ ಇಲಾಖೆಯಲ್ಲಿ ಸಿವಿಲ್‌ ಎಂಜಿನಿಯರ್‌, ಡಿಪ್ಲೊಮಾ ಓದಿದ 1000 ಟ್ರೆçನಿ ಎಂಜಿನಿಯರ್‌ಗಳನ್ನು ನೇಮಿಸಲಾಗುವುದು ಎಂದರು. ಜಿಲ್ಲಾ ಉಸುವಾರಿ ಸಚಿವ ಮಾಧುಸ್ವಾಮಿ,  ಸಂಸದ ನಾರಾಯಣ ಸ್ವಾಮಿ, ಶಾಸರಾದ ಡಾ. ನಾರಾಯಣಸ್ವಾಮಿ, ವೆಂಕಟರಮಣಪ್ಪ, ಜಿಪಂ ಉಪಾಧ್ಯಕ್ಷೆ ಶಾರದಾ, ಡೀಸಿ ಡಾ. ಕೆ. ರಾಕೇಶ್‌ ಕುಮಾರ್‌, ಜಿಪಂ ಸಿಇಒ ಶುಭಾ ಕಲ್ಯಾಣ್‌ ಇದ್ದರು.

ಕೋವಿಡ್‌ 19ದಿಂದ ಲಾಕ್‌ಡೌನ್‌ ಆದ ಮೇಲೆ ಪ್ರಗತಿ ಕೆಲಸಗಳು ಪ್ರಾರಂಭವಾಗಿಲ್ಲ. ಇನ್ನು ಮುಂದೆ ನಿಧಾನವಾಗಿ ಪ್ರಾರಂಭವಾಗುತ್ತವೆ. ಒಟ್ಟು 2019-20ನೇ ಸಾಲಿನಲ್ಲಿ 27,559 ಕೋಟಿ ಅನುದಾನವನ್ನು ಎಸ್‌ಸಿ-ಎಸ್‌ಟಿ ಜನಾಂಗಕ್ಕೆ ವಿಶೇಷ  ಹಂಚಿಕೆ ಮಾಡಲಾಗಿತ್ತು. 25,388 ಕೋಟಿಗಳಷ್ಟು ಖರ್ಚು ಮಾಡಿ ಶೇ.92ರಷ್ಟು ಪ್ರಗತಿ ಸಾಧಿಸಿದ್ದೇವೆ.
-ಗೋವಿಂದ ಎಂ.ಕಾರಜೋಳ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next