Advertisement

ಚಿಪಳೂಣ್‌ ಡ್ಯಾಮ್‌ ಒಡೆದು ಭೀಕರ ಪ್ರವಾಹ; 23 ಸಾವು; 11 ಶವ ಮೇಲಕ್ಕೆ

12:50 PM Jul 04, 2019 | Sathish malya |

ಮುಂಬಯಿ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿಮಳೆಯ ಕಾರಣ, ಇಪ್ಪತ್ತು ಲಕ್ಷ ಕ್ಯೂಬಿಕ್‌ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುವ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪಳೂಣ್‌ ತಾಲೂಕಿನ ತಿವರೆ ಅಣೆಕಟ್ಟು ಬಿರುಕು ಬಿಟ್ಟು ಉಂಟಾಗಿರುವ ಭಾರೀ ಪ್ರವಾಹಕ್ಕೆ 23 ಮಂದಿ ಮೃತಪಟ್ಟಿರುವುದಾಗಿ ಭಯ ಪಡಲಾಗಿದೆ.

Advertisement

ಈ ತನಕ 11 ಶವಗಳು ಸಿಕ್ಕಿವೆ. ಅಣೆಕಟ್ಟಿನ ಕೆಳಭಾಗದಲ್ಲಿ ಭಾರೀ ಪ್ರವಾಹದ ಸಿxತಿ ತಲೆದೋರಿದೆ ಎಂದು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟಿನ ಕೆಳ ಭಾಗದಲ್ಲಿರುವ ಸುಮಾರು 7 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು 12 ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಕಳೆದ ವರ್ಷ ನವೆಂಬರ್‌ ನಲ್ಲೇ ಅಣೆಕಟ್ಟಿನಲ್ಲಿ ಬಿರುಕು ಕಂಡು ಬಂದಿದ್ದಾಗ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ದುರಸ್ತಿ ಕಾರ್ಯ ಈ ತನಕವೂ ನಡೆದಿಲ್ಲ; ಪರಿಣಾಮವಾಗಿ ಇಂದು ಅಣೆಕಟ್ಟಿನಿಂದ ಪ್ರವಾಹೋಪಾದಿಯಲ್ಲಿ ನೀರು ಹೊರ ಹರಿದು ಬರುತ್ತಿದೆ ಎಂದು ವರದಿಗಳು ತಿಳಿಸಿವೆ.

Advertisement

ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ 11 ಶವಗಳನ್ನು ಈ ತನಕ ಮೇಲೆತ್ತಲಾಗಿದೆ ಎಂದು ರತ್ನಾಗಿರಿಯ ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ವಿಶಾಲ್‌ ಗಾಯಕ್‌ವಾಡ್‌ ತಿಳಿಸಿದ್ದಾರೆ. ಅತ್ಯಧಿಕ ಸಂಖ್ಯೆಯ ಗ್ರಾಮಸ್ಥರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next